ಉಪ್ಪಳ: ಸ್ವಸ್ತಿಕ್ ಪ್ರೆಂಡ್ಸ್ ಪ್ರತಾಪನಗರ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಸಾಮೂಹಿಕ ತುಳಸೀ ಪೂಜೆ ಇಂದು ರಾತ್ರಿ ಪ್ರತಾಪನಗರದ ಶ್ರೀ ಗಾಯತ್ರೀ ವಿಶ್ವಕರ್ಮ ಮಂದಿರದಲ್ಲಿನಡೆಯಲಿದೆ. ರಾತ್ರಿ ತುಳಸೀ ಪೂಜೆ, ಪ್ರಸಾದ ವಿತರಣೆ ಬಳಿಕ ಲಘು ಉಪಹಾರ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸ್ವಸ್ತಿಕ್ ಪ್ರೆಂಡ್ಸ್ ಪದಾಧಿಕಾರಿಗಳು ವಿನಂತಿಸಿದ್ದಾರೆ.