ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ದೇವಸ್ಥಾನ ಕಾರ್ತಿಕ ಮಾಸ ಶುಕ್ಲಪಕ್ಷ ಬಿದಿಗೆ ಮೊದಲ್ಗೊಂಡು ಉತ್ಥಾನ ದ್ವಾದಶಿವರೆಗೆ ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ದೇವಸ್ಥಾನ ಇಲ್ಲಿ ನಿತ್ಯ ತುಳಸಿ ಪೂಜೆ ಜರಗಿತು.
ತುಳಸೀ ಪೂಜೆಯ ಪ್ರಸನ್ನ ಮಂಗಳಾರತಿ ನ.24ರಂದು ರಾತ್ರಿ ನೆರವೇರಿತು. ಭಜನ ವೃಂದದವರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಮಾತೆಯ ಅನುಗ್ರಹ ಪಡೆದು ಪುನೀತರಾದರು.