ಪೈವಳಿಕೆ: ಜಿಲ್ಲೆಯ ಪ್ರಸಿದ್ದ ಪ್ರವಾಸೋದ್ಯಮ ಕೇಂದ್ರವಾದ ಪೋಸಡಿ ಗುಂಪೆಯನ್ನು ಮಾಲಿನ್ಯ ಮುಕ್ತ ಹಸಿರು ಟೂರಿಸಂ ಕೇಂದ್ರವಾಗಿಸಲು ತೀರ್ಮಾನಿಸಲಾಗಿದೆ. ಪೈವಳಿಕೆ ಪಂಚಾಯತ್ ಹಾಲ್ ನಲ್ಲಿ ನಡೆದ ನವ ಕೇರಳ ಕ್ರಿಯಾ ಯೋಜನೆ ಪಂಚಾಯತ್ ಮಟ್ಟದ ಸಭೆಯಲ್ಲಿ ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಅವರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಯಿತು.
ನವ ಕೇರಳ ಕ್ರಿಯಾ ಯೋಜನೆ ಜಿಲ್ಲಾ ಕೋ-ಡಿನೆಟರ್ ಕೆ.ಬಾಲಕೃಷ್ಣನ್ ಹಸಿರು ಟೂರಿಸಂ ಯೋಜನೆಯ ಮುಂದಿನ ಕ್ರಮಗಳನ್ನು ಹಾಗೂ ಪ್ರವಾಸಿಗರನ್ನು ಸೆಳೆಯಲು ಬೇಕಾಗಿರುವ ವಿವಿಧ ಪದ್ಧತಿಗಳ ಕುರಿತು ವಿವರಿಸಿದರು.
ಡಿಟಿಪಿಸಿ ಕಾರ್ಯದರ್ಶಿ ಲಿಜೂ ಅವರು ಪ್ರವಾಸೋಧ್ಯಮ ಇಲಾಖೆಯು1.15 ಕೋಟಿ ರೂಪಾಯಿ ಮಂಜೂರು ಮಾಡಿದರಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಚಟುವಟಿಕೆಗಳ ಕುರಿತು ವಿವರಿಸಿದರು. ಪೈವಳಿಕೆ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು, ಪಂಚಾಯತ್ ಸದಸ್ಯರಾದ ಅಬ್ದುಲ್ಲಾ.ಕೆ, ಅಶೋಕ್ ಭಂಡಾರಿ, ಶ್ರೀನಿವಾಸ ಭಂಡಾರಿ, ರಹಮತ್ ರಹಿಮಾನ್ .ಕೆ, ನವ ಕೇರಳ ಕ್ರಿಯಾ ಯೋಜನೆ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್ ಬಾಯಾರು ಮತ್ತಿತರರು ಮಾತನಾಡಿದರು. ಪಂಚಾಯತ್ ಸಹ ಕಾರ್ಯದರ್ಶಿ ಲಾರೆನ್ಸ್ ಸ್ವಾಗತಿಸಿದರು. ಡಿ.7 ರಂದು ಜನಕೀಯ ಶುಚೀಕರಣ ಚಟುವಟಿಕೆಗಳು ನಡೆಯಲಿದೆ.