ಉಪ್ಪಳ: ಎ ಎಲ್ ಪಿ ಇಚ್ಲಂಗೋಡು ಶಾಲೆಯಲ್ಲಿ ಕಥಾ ಟಿಪ್ಪಣಿ “ಮಂಥನ” ಬಿಡುಗಡೆ ಕಾರ್ಯಕ್ರಮ ನಡೆಯಿತು. ಬಿ.ಆರ್ ಸಿ ಯ ಸಂಪನ್ಮೂಲ ವ್ಯಕ್ತಿ ಜೋಯ್ ಸರ್ ರವರು ಕಾರ್ಯಕ್ರಮವನ್ನು ಉದ್ಘಾಟನೆಗೈದರು. ಪಿಟಿಎ ಉಪಾಧ್ಯಕ್ಷರಾದ ಸುರೇಶರವರು ಅಧ್ಯಕ್ಷತೆ ವಹಿಸಿದ್ದರು. ಅಬ್ಬಾಸ್ ಮಾಸ್ಟರ್ ರವರು ಮಕ್ಕಳ ಕಥಾ ಟಿಪ್ಪಣಿಗಳ ಸಂಚಿಕೆ “ಮಂಥನ” ವನ್ನು ಬಿಡುಗಡೆ ಗೊಳಿಸಿದರು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ದಿವಾಕರ ಆಳ್ವ, ಆಡಳಿತ ಸಮಿತಿಯ ಕಾರ್ಯ ಕಾರ್ಯದರ್ಶಿ ಎಂ.ಆರ್ ಕೊರಗಪ್ಪ ಶೆಟ್ಟಿ, ಎಸ್ ಎಸ್.ಜಿಯ ಅಧ್ಯಕ್ಷರಾದ ಮೌನೇಶ ಆಚಾರ್ಯ, ಎಂ.ಪಿ.ಟಿ.ಎ.ಅಧ್ಯಕ್ಷೆ ಯಶೋಧ ಶುಭಾಶಂಸನೆಗೈದರು. ವಿಜ್ಞಾನ ಮೇಳ ಮತ್ತು ಕಲೋತ್ಸವದಲ್ಲಿ ವಿಜೇತರಾದ ಮಕ್ಕಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಶಾಲಾ ವತಿಯಿಂದ ಅಭಿನಂದಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಶ್ರೀಜಯರಾಮ ಸಿ.ಎಚ್ ಸ್ವಾಗತಿಸಿ, ಅಧ್ಯಾಪಕ ಕೃಷ್ಣ ಮೋಹನ ಮಯ್ಯ ವಂದಿಸಿದರು. ಅಧ್ಯಾಪಿಕೆ ಕುಮಾರಿ ದೀಕ್ಷಿತರವರು ನಿರೂಪಿಸಿದರು.