ಮಂಜೇಶ್ವರ: ಹೊಸಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಅಮೆನಡಿಗೆಯಲ್ಲಿ ನಡೆಯುತ್ತಿದೆ, ಸರ್ವೀಸ್ ರಸ್ತೆ ನಿರ್ಮಾಣಗೊಳ್ಳದ ಹಿನ್ನೆಲೆಯಲ್ಲಿ ಹೊಸಂಗಡಿ ಪೇಟೆಯಲ್ಲಿ ಒಂದೇ ರಸ್ತೆಯಲ್ಲಿ ಮಂಗಳೂರು, ಕಾಸರಗೋಡು ಕಡೆಗೆ ಸಂಚಾರ ನಡೆಸುತ್ತಿರುವುದರಿಂದ ಪೇಟೇಯಲ್ಲಿ ದಿನನಿತ್ಯ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿರುವುದಾಗಿ ಕೂಡಲೇ ಇಕ್ಕೇಡೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.


ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕದ ವತಿಯಿಂದ ರಸ್ತೆ ಕಾಮಗಾರಿ ಅವ್ಯವಸ್ಥೆಗೆದುರಾಗಿ ಹೊಸಂಗಡಿಯಲ್ಲಿ ಡಿ.7ರಂದು ಪ್ರತಿಭಟನೆ ನಡೆಸಲಾಯಿತು. ಘಟಕದ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಸದಸ್ಯ ಹಮೀದ್ ಹೊಸಂಗಡಿ ಉದ್ಘಾಟಿಸಿದರು. ವ್ಯಾಪಾರಿ ಘಟಕದ ಕಾರ್ಯದರ್ಶಿ ದಯಾನಂದ ಬಂಗೇರ, ವ್ಯಾಪಾರಿ ಮಹಿಳಾ ವಿಂಗ್ ವಿಭಾಗದ ಕಾರ್ಯದರ್ಶಿ ಜೆಸ್ಸಿ ಅನಿಲ್, ಹಸೈನಾರ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು. ಸಲಾಂ ಹೊಸಂಗಡಿ ಸ್ವಾಗತಿಸಿ, ಸುದರ್ಶನ್ ಧನ್ಯವಾದ ನೀಡಿದರು.




