ಉಪ್ಪಳ: ಬೀಡಿ ಗುತ್ತಿಗೆದಾರ ನಾರಾಯಣ ಪೂಜಾರಿ ನಿಧನ

Share with

ಉಪ್ಪಳ: ಬೇಕೂರು ಬೊಳ್ಳಾರು ನಿವಾಸಿ ಬೀಡಿ ಗುತ್ತಿಗೆದಾರ ನಾರಾಯಣ ಪೂಜಾರಿ [77] ನಿಧನರಾದರು. ಮನೆಯಲ್ಲಿ ದಿಢೀರನೆ ಅಸೌಖ್ಯ ಉಂಟಾಗಿದ್ದು, ಕೂಡಲೇ ಉಪ್ಪಳದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಇವರು ಸುಮಾರು 55 ವರ್ಷಗಳಿಂದ ಭಾರತ್ ಬೀಡಿಯ ಗುತ್ತಿಗೆದಾರರಾಗಿದ್ದಾರೆ. ಸುಭಾಸ್ ನಗರ, ಅಟ್ಟೆಗೋಳಿಯಲ್ಲಿ ಬೀಡಿ ಬ್ರಾಂಚ್‌ನ್ನು ನಡೆಸುತ್ತಿದ್ದರು.

ಬೇಕೂರು ಬೊಳ್ಳಾರು ನಿವಾಸಿ ಬೀಡಿ ಗುತ್ತಿಗೆದಾರ ನಾರಾಯಣ ಪೂಜಾರಿ

ಹಿರಿಯ ಕೃಷಿಕರೂ ಆಗಿದ್ದರು. ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಸುಭಾಸ್ ನಗರ ಇದರ ಸ್ಥಾಪಕ ಸದಸ್ಯರಾಗಿದ್ದಾರೆ. ಮೃತರು ಪತ್ನಿ ಸೀತಾ, ಮಕ್ಕಳಾದ ದಿನೇಶ, ಅಶೋಕ, ವಿವೇಕಾನಂದ, ಕೋಟಿ, ಚೆನ್ನಯ, ಯೋಗೀಶ್ವರಿ, ವಾಣಿ, ಸೊಸೆಯಂದಿರಾದ ಆಶಾಲತಾ, ಸಂದ್ಯಾ, ಪೂಜಾ, ಅಳಿಯಂದಿರಾದ ರೋಹಿದಾಸ್, ಪದ್ಮನಾಭ, ಸಹೋದರರಾದ ಪದ್ಮನಾಭ, ಕಾಂತಪ್ಪ, ಸಹೋದರಿ ಶಾರದಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಮನೆ ಪರಿಸರದಲ್ಲಿ ನಡೆಯಿತು.


Share with

Leave a Reply

Your email address will not be published. Required fields are marked *