ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿಯಿಂದ 16ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ ಪ್ರಯುಕ್ತ ಧಾರ್ಮಿಕ ಸಭೆ

Share with

ಉಪ್ಪಳ: ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿಯ ವತಿಯಿಂದ 16ನೇ ವರ್ಷದ ಸಾಮೂಹಿಕ ವಿಶೇಷ ಹೂವಿನ ಪೂಜೆ ಜರಗಿತು.

ಜಯಂತ.ವಿ ಬಂದ್ಯೋಡು ಇವರನ್ನು ಫಲ ಪುಷ್ಪ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಇದರ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಡ್ಕ ಶ್ರೀ ಭಗವತೀ ತೀಯಾ ಸೇವಾ ಸಂಘದ ಉಪಾಧ್ಯಾಕ್ಷ ಪ್ರಮೋದ್ ಕುಮಾರ್ ಹೇರೂರು ಅಧ್ಯಕ್ಷತೆ ವಹಿಸಿದರು. ಉದ್ಯಮಿ ಬಾಲಕೃಷ್ಣ ಮುಟ್ಟಂ ಧಾರ್ಮಿಕ ಭಾಷಣ ಮಾಡಿದರು. ಭಜನಾ ಕೀರ್ತನ ಗುರುಗಳಾದ ಪ್ರೇಮಲತಾ ಗೋಕುಲ್‌ದಾಸ್ ಕುಂಬಳೆ ಕೃಷ್ಣನಗರ, ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಅಮಿತಾ ಆನಂದ ವೀರನಗರ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಡ್ಕ ಶ್ರೀ ಭಗವತೀ ತೀಯಾ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ.ವಿ ಬಂದ್ಯೋಡು ಹಾಗೂ ಭಜನಾ ಗುರುಗಳಾದ ಪ್ರೇಮಲತಾ ಗೋಕುಲ್‌ದಾಸ್ ಕೃಷ್ಣನಗರ ಇವರನ್ನು ಫಲ ಪುಷ್ಪ, ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.


Share with

Leave a Reply

Your email address will not be published. Required fields are marked *