ಪೈವಳಿಕೆ: ಪಂಚಾಯತ್ನ 7ನೇ ವಾರ್ಡ್ ಬಳ್ಳೂರು ಮುಣ್ಚಿತ್ತಡ್ಕ ಹೊಳೆಯ ಸೇತುವೆಯ ಅಣೆಕಟ್ಟಿಗೆ ತಡೆಗೋಡೆ ನಿರ್ಮಿಸಲು ಊರವರು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಕೃಷಿಕರೇ ಅಧಿಕ ಮಂದಿ ವಾಸವಾಗಿದ್ದು, ಹೊಳೆಯಲ್ಲಿ ನೀರು ಇಂಗಿಸದಿದ್ದರೆ ಮುಂದಿನ ದಿನಗಳಲ್ಲಿ ತೀರಾ ಸಮಸ್ಯೆಗೊಳಗಾಲಿದೆ ಎಂದು ಊರವರು ಅಭಿಪ್ರಯಪಟ್ಟಿದ್ದಾರೆ.
ಪ್ರತೀ ವರ್ಷ ಅಣೆಕಟ್ಟಿಗೆ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕಳೆದ ವರ್ಷ ಹಾಗೂ ಈ ವರ್ಷ ತಡೆಗೋಡೆ ಕಟ್ಟಲು ಸಂಬಂಧಪಟ್ಟ ಅಧಿಕೃತರು ಮುಂದಾಗದಿರುವುದು ಊರವರಿಗೆ ಸಂಕಷ್ಟವನ್ನುಂಟುಮಾಡಿದೆ. ತಡೇಗೋಡೆ ನಿರ್ಮಿಸಲು ಉಪಯೋಗಿಸುವ ಹಲಗೆ ಇಲ್ಲಿನ ಶೆಡ್ ನಲ್ಲಿ ಉಪಯೋಗ ಶೂನ್ಯವಾಗುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ.
ಸಂಬಂಧಪಟ್ಟವರು ಕೂಡಲೇ ತಡೆಗೋಡೆ ನಿರ್ಮಿಸಿ ನೀರನ್ನು ಇಂಗಿಸುವ ಕ್ರಮಕ್ಕೆ ಮುಂದಾಗಬೇಕೆಂದು ಊರವರು ಒತ್ತಾಯಿಸಿದ್ದಾರೆ. ಬಗ್ಗೆ ಪಂಚಾಯತ್ ಅಧಿಕಾರಿಯವರನ್ನು ಒತ್ತಾಯಿಸಿರುವುದಾಗಿ ವಾರ್ಡ್ ಸದಸ್ಯೆ ಭಟ್ ತಿಳಿಸಿದ್ದಾರೆ.