ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನಿಗೆ ಮುಡಿ ಅರ್ಪಿಸಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ. ಈ ವೇಳೆ ಅವರು, ದೇವಾಲಯದ ಅಧಿಕಾರಿಗಳು ಶ್ರೀವಾರಿ ತೀರ್ಥಪ್ರಸಾದ ನೀಡಿ ಸತ್ಕರಿಸಿದರು.

ಈ ಸಂದರ್ಭ ಭಕ್ತರ ಅನುಕೂಲಕ್ಕೆ ಟಿಟಿಡಿಗೆ ಅಂಬಾನಿ 27.5 ಕೋಟಿ ಬೆಲೆಯ 25 ಎಲೆಕ್ಟಿಕ್ ಬಸ್ ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೆ 50 ಚಾಲಕರ ಸಂಬಳವನ್ನು ರಿಲಯನ್ಸ್ ಸಂಸ್ಥೆ ವಹಿಸಲಿದ್ದು, ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಸಮ್ಮತಿಸಿದ್ದಾರೆ.




