ಶಾಲಾ ಕಾಂಪೌಂಡ್ ಗೇಟ್ ಬಿದ್ದು 4 ವರ್ಷದ ಬಾಲಕಿ ಸಾವನಪ್ಪಿರುವ ಘಟನೆ ಮಡಿಕೇರಿಯ ಕುಶಾಲನಗರದ ಬಸವನಹಳ್ಳಿಯಲ್ಲಿ ನಡೆದಿದೆ. ಮಗಳನ್ನು ಕಳೆದುಕೊಂಡು ಪೋಷಕರು ಗೋಳಾಟ ಮಾಡುತ್ತಿದ್ದಾರೆ. ನಿನ್ನೆ ಅಕ್ಕನನ್ನು ಕರೆತರಲು ಅಪೂರ್ವ (4) ಶಾಲೆಗೆ ತೆರಳಿದ್ದಳು. ಅಪೂರ್ವ ಮೇಲೆ ಕಬ್ಬಿಣದ ಗೇಟ್ ಮತ್ತು ಕಾಂಪೌಂಡ್ ಬಿದ್ದು ಅಪೂರ್ವ ಸಾವನ್ನಪ್ಪಿದ್ದಾಳೆ.

ವಾಲ್ಮೀಕಿ ಆಶ್ರಮ ಶಾಲೆಯ ಬಳಿ ಈ ಒಂದು ಘಟನೆ ನಡೆದಿದೆ. ವಸತಿ ಶಾಲೆ ಸಿಬ್ಬಂದಿ ನಿರ್ಲಕ್ಷಕ್ಕೆ ಪೋಷಕರು ಕಿಡಿ ಕಾರಿದ್ದಾರೆ.




