ಉಪ್ಪಳ: ಅಯೋಧ್ಯಾ ಶ್ರೀರಾಮ ದೇವರ ಪ್ರಾಣ ಪ್ರತಿಷ್ಟೆ; ಪ್ರತಾಪನಗರ ಗಣೇಶ ಮಂದಿರದಲ್ಲಿ ಅದ್ಧೂರಿಯಾಗಿ ನಡೆದ ವಿವಿಧ ಕಾರ್ಯಕ್ರಮ

Share with

ಉಪ್ಪಳ: ಅಯೋಧ್ಯೆಯಲ್ಲಿ ಶ್ರೀರಾಮ್ ಲಾಲಾ ದೇವರ ಪ್ರಾಣ ಪ್ರತಿಷ್ಟೆ ಪ್ರಯುಕ್ತ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ಶ್ರೀ ಗೌರೀ ಗಣೇಶ ಭಜನಾ ಮಂದಿರ ಪ್ರತಾಪನಗರ ಇದರ ಆಶ್ರಯದಲ್ಲಿ ಜ.22ರಂದು ಮಂದಿರದಲ್ಲಿ ಕರಸೇವಕರಿಗೆ ಸನ್ಮಾನ ಸಹಿತ ವಿವಿಧ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಮಂದಿರದಲ್ಲಿ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಇದರ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಭಜನೆ, ಅಷ್ಟೋತ್ತರ ಶತ ಶ್ರೀರಾಮ ನಾಮತಾರಕ ಜಪ, ಹನುಮಾನ್ ಚಾಲೀಸಾ ಪಠಣ, ಸಹಕಾರ ಭಾರತೀಯ ಜಿಲ್ಲಾ ಸಂಘಟನ ಪ್ರಮುಖ್, ಆರ್.ಎಸ್.ಎಸ್ ಮುಖಂಡ ಕಿದೂರು ಶಂಕರನಾರಾಯಣ ಸತ್ಸಂಗ ನಡೆಸಿದರು.

ಮಧ್ಯಾಹ್ನ ಶ್ರೀರಾಮ್ ಲಾಲಾ ದೇವರ ಪ್ರಾಣ ಪ್ರತಿಷ್ಟೆಯ ನೇರ ಪ್ರಸಾರ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಭಾರೀ ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದರು. ಶ್ರೀ ರಾಮ ಜನ್ಮ ಭೂಮಿಯಲ್ಲಿ ಕರಸೇವಕರಾಗಿ ಸೇವೆ ಮಾಡಿದ ಪ್ರತಾಪನಗರದ ಹಿರಿಯ ಕಾರ್ಯಕರ್ತರಾದ ಪ್ರಭಾಕರ ಕೃಷ್ಣನಗರ, ರಾಮ ಶೆಟ್ಟಿಗಾರ್, ಸಚ್ಚೀಂದ್ರ ಶೆಟ್ಟಿ ತಿಂಬರ ಹಾಗೂ ಸ್ವರ್ಗೀಯ ರಾಮ ಆಚಾರ್ಯರವರ ಪರವಾಗಿ ಅವರ ಶ್ರೀಮತಿಯಾದ ಲಕ್ಷ್ಮೀ ಆಚಾರ್ಯ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮಧು ಮಾಸ್ತರ್, ನಿತಿನ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಪ್ರತಾಪನಗರ ವೈಯಕ್ತಿಕ ಗೀತೆ ಹಾಡಿದರು. ರಾತ್ರಿ ಜೈ ಹನುಮಾನ್ ಪ್ರೆಂಡ್ಸ್ ಕ್ಲಬ್ ಪ್ರತಾಪನಗರ ಇವರಿಂದ ಸಿಡಿಮದ್ದು ಪ್ರದರ್ಶನ ನಡೆಯಿತು.


Share with

Leave a Reply

Your email address will not be published. Required fields are marked *