ಉಪ್ಪಳ: ಜ.28ರಿಂದ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ

Share with

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವಧಿ ಕಳಿಯಾಟ ಮಹೋತ್ಸವ ಜನವರಿ 28ರಿಂದ ಫೆ.1ರತನಕ ನಡೆಯಲಿದೆ.

ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ

ಜ.27ರಂದು ಸಂಜೆ 4ಕ್ಕೆ ಚಪ್ಪರ ಮುಹೂರ್ತ. 28ರಂದು ಬೆಳಿಗ್ಗೆ 11ಕ್ಕೆ ಶ್ರೀ ನಾಗಸನ್ನಿಧಿಯಲ್ಲಿ ನಾಗತಂಬಿಲ, ಸಂಜೆ 6ರಿಂದ ಭಜನೆ, ರಾತ್ರಿ 8ಕ್ಕೆ ಭಂಡಾರ ಆಗಮನ, ರಾತ್ರಿ 10ಕ್ಕೆ ನಡಾವಳಿ ಉತ್ಸವ.

29ರಂದು ಬೆಳಿಗ್ಗೆ 10ಕ್ಕೆ ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ, ಮಧ್ಯಾಹ್ನ 12ಕ್ಕೆ ಕಾಳಪುಲಿಯನ್ ದೈವದ ವೆಳ್ಳಾಟಂ, ಮಧ್ಯಾಹ್ನ 2ಕ್ಕೆ ಪುಲಿಕಂಡನ್ ದೈವದ ವೆಳ್ಳಾಟಂ, ಸಂಜೆ 3ಕ್ಕೆ ವಿಷ್ಣುಮೂರ್ತಿ ದೈವದ ತೊಡಂಗಲ್, 4ಕ್ಕೆ ಕರೀಂದ್ರನ್ ದೈವದ ವೆಳ್ಳಾಟಂ, ಕೆಂಡಸೇವೆ, ಬಲಿ, ಬಿಂನದರ್ಶನ, ಪುಲ್ಲೂರಾಳಿ ದೈವದ ತೋಟ್ಟಂ, ರಾತ್ರಿ 7ಕ್ಕೆ ತಾನಂ ಮುಂಬಾಯ ದೈವ [ಪುಲಿಚೇಗವನ್], ರಾತ್ರಿ 9ಕ್ಕೆ ಕರೀಂದ್ರನ್ ದೈವ, 10ಕ್ಕೆ ಕಾಳಪುಲಿಯನ್ ದೈವ, 11ಕ್ಕೆ ಪುಲಿಕಂಡನ್ ದೈವ.

30ರಂದು ಬೆಳಿಗ್ಗೆ 6ಕ್ಕೆ ವಿಷ್ಣುಮೂರ್ತಿ ದೈವ, 8ಕ್ಕೆ ಪುಲ್ಲೂರಾಳಿ ದೈವ, 11ಕ್ಕೆ ಕಳಸಾಟ್, ಮಧ್ಯಾಹ್ನ 12ಕ್ಕೆ ಭಗವತೀ ದರ್ಶನ, ನಡುಕಳಿಯಾಟ ಉತ್ಸವ ಆರಂಭ, ಮಧ್ಯಾಹ್ನ 2ಕ್ಕೆ ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ, ಅಪರಾಹ್ನ 3ಕ್ಕೆ ಕಾಳಪುಲಿಯನ್ ದೈವದ ವೆಳ್ಳಾಟಂ, ಸಂಜೆ 4ಕ್ಕೆ ಕರೀಂದ್ರನ್ ದೈವದ ವೆಳ್ಳಾಟಂ, ರಾತ್ರಿ 8ಕ್ಕೆ ಹೂವಿನ ಪೂಜೆ, 9ಕ್ಕೆ ಪುಲಿಕಂಡನ್ ದೈವದ ವೆಳ್ಳಾಟಂ, ಕೆಂಡಸೇವೆ, ಉತ್ಸವ ಬಲಿ, ಬಿಂಬದರ್ಶನ, ಪುಳ್ಳಿಂಕರಿಂಗಾಳಿ ಹಾಗೂ ಪುಲ್ಲೂರಾಳಿ ದೈವದ ತೋಟ್ಟಂ, ವಿಷ್ಣುಮೂರ್ತಿ ದೈವದ ತೊಡಂಗಲ್, ಮುಂಜಾನೆ 2ಕ್ಕೆ ಆರತಿ ದೈವ, ಹರಕೆ ಮತ್ತು ಅಕ್ಕಿ ಪ್ರಸಾದ ವಿತರಣೆ.

31ರಂದು ಬೆಳಿಗ್ಗೆ 5ಕ್ಕೆ ಕಾಳಪುಲಿಯನ್ ದೈವ, ಬೆಳಿಗ್ಗೆ 8ಕ್ಕೆ ಪುಲಿಕಂಡನ್ ದೈವ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ಹಾಗೂ ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ ಸಂದರ್ಶಿಸಿ ಕ್ಷೇತ್ರಕ್ಕೆ ನಿರ್ಗಮನ, 8.30ಕ್ಕೆ ವಿಷ್ಣುಮೂರ್ತಿ ದೈವ ಉಪ್ಪಳ ಸಸಿಹಿತ್ಲು ನೆಲಿಕ್ಕತೀಯಾ ತರವಾಡಿಗೆ ಭೇಟಿ, ಮಧ್ಯಾಹ್ನ 2ಕ್ಕೆ ಕರೀಂದ್ರನ್ ದೈವ, 3ಕ್ಕೆ ಪುಲ್ಲುರಾಳಿ ದೈವ, ಸಂಜೆ 6ಕ್ಕೆ ಕಳಸಾಟ್, ಭಗವತೀ ದರ್ಶನ, ತೋಟ್ಟಂ.

ಫೆ.1ರಂದು ಬೆಳಿಗ್ಗೆ 4ಕ್ಕೆ ಪುಲಿಕಂಡನ್ ದೈವದ ವೆಳ್ಳಾಟಂ, 5ಕ್ಕೆ ಕರೀಂದ್ರನ್ ದೈವದ ವೆಳ್ಳಾಟಂ, 6ಕ್ಕೆ ಕಾಳಪುಲಿಯನ್ ದೈವದ ಪೆಳ್ಳಾಟಂ, 8ಕ್ಕೆ ಪುಲ್ಲೂರು ಕಣ್ಣನ್ ದೈವದ ವೆಳ್ಳಾಟಂ, ಕೆಂಡಸೇವೆ, ಬಲಿ, ಬಿಂಬದರ್ಶನ, ಪುಲ್ಲೂರಾಳಿ ದೈವದ ತೋಟ್ಟಂ, ಮಧ್ಯಾಹ್ನ ಪುಲಿಕಂಡನ್ ದೈವ, ಮಧ್ಯಾಹ್ನ 1ಕ್ಕೆ ವಿಷ್ಣುಮೂರ್ತಿ ತೊಡಂಗಲ್, 2ಕ್ಕೆ ಕರೀಂದ್ರನ್ ದೈವ, ಸಂಜೆ 4ಕ್ಕೆ ಕಾಳಪುಲಿಯನ್ ದೈವ, 6ಕ್ಕೆ ಗುಳಿಗ ದೈವದ ಕೋಲ, ರಾತ್ರಿ 7ಕ್ಕೆ ಹೂವಿನ ಪೂಜೆ, 8ಕ್ಕೆ ಪುಲ್ಲೂರಾಳಿ ದೈವ, 10ಕ್ಕೆ ಕಳಸಾಟ್, ಮುಂಜಾನೆ 12ರಿಂದ ಹೂಮುಡಿ ದೈವ, ಭಗವತೀ ದರ್ಶನ, ಕೆಂಡಸೇವೆ, ಬಲಿ ಉತ್ಸವ, ವಿಷ್ಣುಮೂರ್ತಿ ದೈವ, ಹರಕೆ, ಪ್ರಸಾದ ವಿತರಣೆ ಬಳಿಕ ಭಂಡಾರ ನಿರ್ಗಮಿಸಲಿದೆ. ಉತ್ಸವದ ಸಂದರ್ಭದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.


Share with

Leave a Reply

Your email address will not be published. Required fields are marked *