ಉಪ್ಪಳ: ವಿಷ ಸೇವಿಸಿ ಗಂಭೀರವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಮೃತಪಟ್ಟ ಘಟನೆ ನಡೆದಿದೆ.
ಐಲ ಮೈದಾನ ಪರಿಸರ ನಿವಾಸಿ ವ್ಯಾಪಾರಿ ಧನಂಜಯ [47] ಮೃತಪಟ್ಟ ವ್ಯಕ್ತಿ ಒಂದು ವಾರದ ಹಿಂದೆ ಇವರು ವಿಷಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಶ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿರುವುದಾಗಿ ತಿಳಿಯಲಾಗಿದೆ. ಮೃತರು ಪತ್ನಿ ಸುನಿತ, ಮಕ್ಕಳಾದ ಅಂಜಲಿ, ನಿಖಿಲ್, ಸಹೋದರ ರವಿಚಂದ್ರ, ಸಹೋದರಿಯರಾದ ಲಲಿತ, ನಳಿನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.