ಉಪ್ಪಳ: ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಧನಂಜಯ ಮೃತ್ಯು

Share with

ಉಪ್ಪಳ: ವಿಷ ಸೇವಿಸಿ ಗಂಭೀರವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಾಪಾರಿ ಮೃತಪಟ್ಟ ಘಟನೆ ನಡೆದಿದೆ.

ಐಲ ಮೈದಾನ ಪರಿಸರ ನಿವಾಸಿ ವ್ಯಾಪಾರಿ ಧನಂಜಯ

ಐಲ ಮೈದಾನ ಪರಿಸರ ನಿವಾಸಿ ವ್ಯಾಪಾರಿ ಧನಂಜಯ [47] ಮೃತಪಟ್ಟ ವ್ಯಕ್ತಿ ಒಂದು ವಾರದ ಹಿಂದೆ ಇವರು ವಿಷಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್‌ಲಾಕ್ ಆಶ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿರುವುದಾಗಿ ತಿಳಿಯಲಾಗಿದೆ. ಮೃತರು ಪತ್ನಿ ಸುನಿತ, ಮಕ್ಕಳಾದ ಅಂಜಲಿ, ನಿಖಿಲ್, ಸಹೋದರ ರವಿಚಂದ್ರ, ಸಹೋದರಿಯರಾದ ಲಲಿತ, ನಳಿನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *