ಸುಳ್ಯ: ಬಸ್‌ ಮತ್ತು ಬೈಕ್‌ ಅಪಘಾತ; ಶಿಕ್ಷಕ ಸಾವು

Share with

ಸುಳ್ಯ: ಅರಂತೋಡು ಅರಂಬೂರಿನ ಪಾಲಡ್ಕದಲ್ಲಿ ಸಂಭವಿಸಿದ ಬಸ್‌ ಮತ್ತು ಬೈಕ್‌ ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡ ಶಿಕ್ಷಕರೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಪದ್ಮನಾಭ ಮೃತಪಟ್ಟ ಶಿಕ್ಷಕ

ಪದ್ಮನಾಭ ಮೃತಪಟ್ಟ ಶಿಕ್ಷಕ. ಪದ್ಮನಾಭ ಚಲಾಯಿಸುತ್ತಿದ್ದ ಬೈಕ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗೂನಡ್ಕ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ಸುಳ್ಯದಲ್ಲಿ ವಾಸವಾಗಿದ್ದರು.


Share with

Leave a Reply

Your email address will not be published. Required fields are marked *