ಬಾಯಾರು: ಚೇರಾಲು ರಂಬಾಯಿಮೂಲೆ ನಿವಾಸಿ ಕರಿಯರವರ ಪತ್ನಿ ಬೀಡಿ ಕಾರ್ಮಿಕೆ ರತ್ನ [62] ನಿಧನರಾದರು. ಇವರು ಮನೆಯಲ್ಲಿ ಕುಸಿದು ಬಿದ್ದಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತಿ, ಮಕ್ಕಳಾದ ವಿಶ್ವನಾಥ, ಪ್ರಿಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮನೆಗೆ ವಿಶ್ವಹಿಂದೂಪರಿಷತ್ ನೇತಾರರದ ಶಂಕರ ಭಟ್ ಉಳುವಾನ, ಮೋಹನ ಬಲ್ಲಾಳ್, ಬಿಜೆಪಿ ನೇತಾರರಾದ ಸದಾಶಿವ ಚೇರಾಲು, ಕೃಷ್ಣಪ್ಪ ಚೇರಾಲು, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ, ಸಾಮಾಜಿಕ ಕಾರ್ಯರ್ತೆಯರಾದ ವಿಮಲ ಟೀಚರ್, ಲತಾ, ಸುಶೀಲ, ಆಶಾ ಮೊದಲಾದವರು ಭೇಟಿ ನೀಡಿ ಸಂತಾಪ ಸೂಚಿಸಿದರು.