ಉಪ್ಪಳ: ಜಿಲ್ಲಾ ಆಸ್ಪತ್ರೆ ಸಂಚರಿಸುವ ನೇತ್ರ ವಿಭಾಗ ಮಂಜೇಶ್ವರ ಬ್ಲಾಕ್, ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಇದರ ನೇತೃತ್ವದಲ್ಲಿ ಉಚಿತ ನೇತ್ರ ಪರಿಶೀಲನಾ ಶಿಬಿರ ಮಾ.19ರಂದು ಹೇರೂರು ಅಯ್ಯಪ್ಪನಗರದ ವಿನಾಯಕ ಮಿತ್ರ ವೃಂದದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಿತ್ರ ವೃಂದದ ಅಧ್ಯಕ್ಷ ಸವಿರಾಜು, ಮಂಗಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಾಕ್ಷ ಯೂಸಫ್, ವೈದ್ಯರುಗಳಾದ ಡಾ.ಅಪರ್ಣ, ಪ್ರತಿಭಾ.ಬಿ.ಪಿ, ಸಂಗೀತ ಮೊದಲಾದವರು ಉಪಸ್ಥಿತರಿದ್ದರು. ಹಲವಾರು ಮಂದಿ ಗ್ರಾಮಸ್ಥರು ಶಿಬಿರದ ಪ್ರಯೋಜನೆಯನ್ನು ಪಡೆದರು.