ಕುರುಡಪದವು: ಪಾರೆಕೋಡಿ ಮಂಟಮೆ ಶ್ರೀ ವಾರಾಹೀ ಸೇವಾ ಸಮಿತಿ ಆಶ್ರಯದಲ್ಲಿ ಮಲರಾಯ ದೈವದ ನೇಮೋತ್ಸವ ಮಾ.25ರಂದು ನಡೆಯಲಿದೆ.
ಇದರ ಅಂಗವಾಗಿ 24ರಂದು ರಾತ್ರಿ 10ಕ್ಕೆ ಕರುವೋಳು ಭಂಡಾರ ಸ್ಥಾನದಿಂದ ಭಂಡಾರ ಇಳಿಯುವುದು, 25ರಂದು ಸಂಜೆ 6ಕ್ಕೆ ಮಲರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ, ರಾತ್ರಿ 8.30ರಿಂದ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದ ರಾತ್ರಿ 10ಕ್ಕೆ ಸ್ಥಳೀಯ ಮಕ್ಕಳಿಂದ ನೃತ್ಯ, ರಾತ್ರಿ 11.30ಕ್ಕೆ ಚಾಪರ್ಕ ಕಲಾವಿದರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ, ನಿರ್ದೇಶಿಸಿರುವ ನಾಯಿದ ಬೀಲ ತುಳು ನಾಟಕ ಪ್ರದರ್ಶನಗೊಳ್ಳಲಿದೆ.