ಮಂಜೇಶ್ವರ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಯಾವರ ತೋಟ ಇಲ್ಲಿ ೨೦೨೪- ೨೫ನೇ ಶೈಕ್ಷಣಿಕ ರ್ಷದ ಪ್ರವೇಶೋತ್ಸವವು ಶಾಲಾ ಅಸೆಂಬ್ಲಿ ಮೂಲಕ ಆರಂಭವಾದ ಈ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಸಭಾ ಕಾರ್ಯಕ್ರಮ ದೊಂದಿಗೆ ಮುಂದುವರೆಯಿತು. ಪಿಟಿಎ ಪದಾಧಿಕಾರಿಗಳು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಕ್ರಮ ಉಪಸ್ಥಿತರಿದ್ದ ಈ ವೇದಿಕೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಮಾತ್ರವಲ್ಲ ಈ ಶಾಲಾ ಸಂರಕ್ಷಣಾ ಸಮಿತಿ ಪದಾಧಿಕಾರಿಗಳೂ ಆದ ಹಲವು ದಾನಿಗಳು ಪೂರೈಸಿದಂಥ ಬ್ಯಾಗ್,ಪುಸ್ತಕಗಳು ಮುಂತಾದ ಕೆಲವು ಕಲಿಕೋಪಕರಣಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಆಸಿಫ್ ಉದ್ಯಾವರ, ಅಬ್ದುಲ್ಲ, ಸೆಮಿನ, ಮುಖ್ಯೋಪಾಧ್ಯಾಯನಿ ಹರಿಣಾಕ್ಷಿ ಟೀಚರ್,ಸಹ ಶಿಕ್ಷಕಿ ಗಾಯತ್ರಿ ಟೀಚರ್ ಮುಂತಾದವರು ಹೊಸ ಶೈಕ್ಷಣಿಕ ರ್ಷಕ್ಕೆ ಶುಭ ಹಾರೈಸಿದರು. ಶಿಕ್ಷಕ ವರ್ಗದವರಿಂದ ರಕ್ಷಕರಿಗೆ ಮಕ್ಕಳ ಕಲಿಕೆಗೆ ಹಾಗೂ ಉತ್ತಮ ಪಾಲನೆಗೆ ಅಗತ್ಯವಾದ ಜಾಗೃತಾ ಮಾಹಿತಿಯನ್ನು ನೀಡಲಾಯಿತು.
ಮಕ್ಕಳಿಂದ ಹಲವು ಮನೋರಂಜನಾ ಕಾರ್ಯಕ್ರಮಗಳು ನಡೆದವು.ಮಕ್ಕಳಿಗೆ ಲಡ್ಡು ಚಾಕಲೇಟ್ ಪಾಯಸ ಮುಂತಾದ ಸಿಹಿ ತಿಂಡಿಗಳನ್ನು ಹಂಚಲಾಯಿತು. ಶಾಲಾಭಿವೃದ್ಧಿ ಕಾರ್ತಕರ್ತರು ಪಿಟಿಎ, ಶಾಲಾ ಸಿಬ್ಬಂದಿ ವರ್ಗ ಹಾಗೂ ಮಕ್ಕಳ ಸಹಯೋಗದೊಂದಿಗೆ ಹೊಸ ಶೈಕ್ಷಣಿಕ ವರ್ಷವನ್ನು ಅತ್ಯಂತ ಸಡಗರದಿಂದ ಸ್ವಾಗತಿಸಲಾಯಿತು