ಪೈವಳಿಕೆ: ಪೈವಳಿಕೆ ಪಂಚಾಯತ್ನ ೧೯ನೇ ವಾರ್ಡ್ ಚಿಪ್ಪಾರುನಲ್ಲಿರುವ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ವರ್ಷ ಕಳೆದರೂ ದುರಸ್ಥಿಗೆ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂಗನವಾಡಿಗೆ ಬರುವುದನ್ನು ನಿಶೇಷಿದಿಸಲಾಗಿದೆ. ಆದರೆ ಇದೀಗ ಅವ್ಯವಸ್ಥೆಹೊಂದಿರುವ ಅಮ್ಮೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿತಾತ್ಕಾಲಿಕವಾಗಿ ಕಾರ್ಯಾಚರಿಸುತ್ತಿದೆ. ಆದರೆ ಇಲ್ಲಿ ಸರಿಯಾದ ದಾರಿಯ ಸೌಕರ್ಯ ಇಲ್ಲದಿರುವುದರಿಂದ ಮಕ್ಕಳ ಸಂಖ್ಯೆ ತೀರಾ ಕಡಿಮೆಗೊಂಡಿರುವುದಾಗಿ ಊರವರು ತಿಳಿಸಿದ್ದಾರೆ. ಶೋಚನೀಯ ಅಂಗನವಾಡಿಯನ್ನು ದುರಸ್ಥಿಗೊಳಿಸಲು ಅಧಿಕಾರಿಗಳು ನಿರ್ಲಕ್ಷ÷್ಯ ತೋರುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಈ ಹಿಂದೆ ಅಧಿಕಾರಿಗಳು ಅಂಗನವಾಡಿಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲಿಸಿ ತೆರಳಿದ್ದರು. ಆದರೆ ಇದು ವರೆಗೂ ದುರಸ್ಥಿಗೆ ಅಥವಾ ಹೊಸ ಅಂಗನವಾಡಿ ನಿರ್ಮಾಣದ ಬಗ್ಗೆ ಯಾವುದೇ ಸೂಚನೆಯಿಲ್ಲ ಎಂಬುದಾಗಿ ಊರವರು ತಿಳಿಸಿದ್ದಾರೆ. ಈ ಅಂಗನವಾಡಿಯಲ್ಲಿ ನೀರಿನ ವ್ಯವಸ್ಥೆಗಾಗಿ ಸರಕಾರ ಕೊಳವೆ ಬಾವಿಯನ್ನು ನಿರ್ಮಿಸಿದ್ದರೂ ನೀರನ್ನು ಕುಡಿಯಲು ಅಸಾದ್ಯವಾಗಿದ್ದು, ಪರಿಸರದಿಂದ ನೀರನ್ನು ತಂದು ಉಪಯೋಗಿಸುತ್ತಿದ್ದಾರೆ. ಇದೀಗ ಈ ಅಂಗನವಾಡಿ ಉಪಯೋಗ ಶೂನ್ಯಗೊಂಡಿದೆ. ಈ ಅಂಗನವಾಡಿಗೆ [ದಿ] ಅಹಮ್ಮದ್ ಹಾಜಿ ಖಂಡಿಗೆ ಇವರು ಸ್ಥಳ ದಾನ ಮಾಡಿದ್ದು, ೧೯೯೯ರಲ್ಲಿ[ದಿ] ಐತ್ತಪ್ಪ ಶೆಟ್ಟಿಗಾರ್ ಚಿಪ್ಪಾರ್ ರವರು ಅಂಗನವಾಡಿ ಕಟ್ಟಡವನ್ನು ಉದಾರವಾಗಿ ನಿರ್ಮಿಸಿದ್ದರು. ಬಳಿಕ ಸರಕಾರಕ್ಕೆ ಹಸ್ತಾಂತರಿಸಿರುವುದಾಗಿ ಊರವರು ತಿಳಿಸಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಹೊಸ ಅಂಗನವಾಡಿ ಅಥವಾ ದುರಸ್ಥಿಗೊಳಿಸಿ ಮಕ್ಕಳ ಕಲಿಕೆಗೆ ವ್ಯವ್ಬಸ್ಥೆ ಕಲ್ಪಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.