ಪೆರ್ಲದಲ್ಲಿ ವಿಶ್ವಹಿಂದೂ ಪರಿಷತ್‌ನಿಂದ ಪ್ರತಿಭಟನಾ ಮೆರವಣಿಗೆ

Share with

ಉಪ್ಪಳ: ಜಮ್ಮು ಕಾಶ್ಮೀರದಲ್ಲಿ ವೈಷ್ಣವಿದೇವಿ ಮತ್ತು ೧೦ಕ್ಕಿಂತಲೂ ಅಧಿಕ ಹಿಂದೂ ತೀರ್ಥಯಾತ್ರಿಗಳ ಹತ್ಯೆಗೈದ ಅಟ್ಟಹಾಸದ ವಿರುದ್ದ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಜಿಲ್ಲಾ ಸಮಿತಿಯ ನೇತೄತ್ವದಲ್ಲಿ  ಪೆರ್ಲ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ 14.6.2024 ಸಂಜೆ ನಡೆಯಿತು. ವಿಶ್ವಹಿಂದೂ ಪರಿಷತ್ ಮುಖಂಡರಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಉದ್ಘಾಟಿಸಿದರು.  ಹರಿಪ್ರಸಾದ್ ಪುತ್ರಕಳ ಅಧ್ಯಕ್ಷತೆ ವಹಿಸಿದರು.  ಮಾಧವ ನಂಬೂದಿರಿ ಬೌಧಿಕ್ ಮಾಡಿದರು. ರಾಧಾಕೃಷ್ಣ ಭಟ್ ಪತ್ತಡ್ಕ,  ಕೆ.ಸಿ ಚಂದ್ರನ್, ಬಜರಂಗದಳ ಮುಖಂಡರಾದ ಪ್ರದೀಪ್ ಪೆರಿಯಾಲ್, ಹರೀಶ್ ನಾರಂಪಾಡಿ, ಅನಿಲ್ ಮಣಿಯಂಪಾರೆ ಮೊದಲಾದವರು ಉಪಸ್ಥಿತಿತರಿದ್ದರು. ರಾಧಾಕೃಷ್ಣ ಭಟ್ ಪತ್ತಡ್ಕ ಸ್ವಾಗತಿಸಿ, ಕೆ.ಸಿ ಚಂದ್ರನ್ ವಂದಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಪೆರ್ಲ ಶ್ರೀ ಸತ್ಯನಾರಾಯಣ ಮಂದಿgದ ವಠಾರದಿಂದ ಹೊರಟ ಮೆರವಣಿಗೆ ಪೇಟೇಯಲ್ಲಿ ಸಮಾಪ್ತಿಗೊಂಡಿತು.


Share with

Leave a Reply

Your email address will not be published. Required fields are marked *