ಪೆರ್ವೋಡಿಯಲ್ಲಿ ರಸ್ತೆ ಕುಸಿದು ಬಿದ್ದು ವರ್ಷ ಕಳೆಯುತ್ತಾ ಬಂದರೂ ದುರಸ್ಥಿಗೆ ಕ್ರಮಯಿಲ್ಲ: ವಾಹನ ಸಂಚಾರ ಭೀತಿಯಲ್ಲಿ ಊರವರಿಂದ ಪ್ರತಿಭಟನೆ ಎಚ್ಚರಿಕೆ

Share with


ಪೈವಳಿಕೆ: ಲೊಕೋಪಯೋಗಿ ಇಲಾಖೆಯ ಮುಳಿಗದ್ದೆ-ಬಳ್ಳೂರು ರಸ್ತೆಯ ಪೆರ್ವೋಡಿಯಲ್ಲಿ ರಸ್ತೆ ಕುಸಿದು ಬಿದ್ದು ಒಂದು ವರ್ಷ ಕಳೆಯುತ್ತಾ ಬಂದರೂ ದುರಸ್ಥಿಗೆ ಕ್ರಮಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಮಳೆಗಾಲದ ವೇಳೆ ರಸ್ತೆ ದಿಡೀರನೆ ಕುಸಿದು ಬಿದ್ದಿದ್ದು, ರಸ್ತೆ ಬಳಿಯಲ್ಲೇ ಖಾಸಾಗಿ ವ್ಯಕ್ತಿಯ ತೋಟದ ಕೆರೆ ಇರುವುದರಿಂದ ವಾಹನ ಸಂಚಾರಕ್ಕೆ ಭೀತಿ ಸೃಷ್ಟಿಯಾಗಿದೆ. ಕುಸಿದು ಬಿದ್ದ ಸ್ಥಳಕ್ಕೆ ಅಧಿಕಾರಿಗಳು ತಲುಪಿ ಮಾಹಿತಿ ಸಂಗ್ರಹಿಸಿದ್ದರು. ಆದರೆ ದುರಸ್ಥಿಗೊಳಿಸದ ಕಾರಣ ಆತಂಕದಲ್ಲೇ ಬಸ್ ಸಹಿತ ವಾಹನಗಳು ಸಂಚರಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ದುರಸ್ಥಿಗೆ ಪಂಚಾಯತ್ ಸದಸ್ಯೆ ಜಯಲಕ್ಷಿ÷್ಮ ಭಟ್ ಸಹಿತ ಊರವರು ನಿರಂತರ ಅಧಿಕಾರಿಗಳ ಗಮನ ಸೆಳೆಯುತಲೇ ಬಂದಿದ್ದರು. ಈ ಮಧ್ಯೆ ಲೊಕೋಪಯೋಗಿ ಇಲಾಖೆ ಉದ್ಯೋಗಸ್ಥರು ತಲುಪಿ ಕುಸಿದ ರಸ್ತೆ ಪರಿಸರದಲ್ಲಿ ಹಗ್ಗವನ್ನು ಕಟ್ಟಿ, ಅಘಾತ ವಲಯ ಎಂದು ಬೋರ್ಡ್ನ್ನು ಹಾಕಿಹೋಗಿದ್ದಾರೆ. ಆದರೆ ಭದ್ರತೆ ಹೆಸರಿಗೆ ಮಾತ್ರವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದೀಗ ಮಳೆಗೆ ಮತ್ತೆ ಕುಸಿಯಲು ಆರಂಭಿಸಿದ್ದು, ಭೀತಿ ಸೃಷ್ಟಿಯಾಗಿದೆ. ರಸ್ತೆಯನ್ನು ದುರಸ್ಥಿಗೊಳಿಸುವ ಕ್ರಮಕ್ಕೆ ಮುಂದಾಗದ್ದು, ಊರವರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕುಸಿದು ಬಿದ್ದ gರಸ್ತೆಯನ್ನು ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ಥಿಗೆ ಕ್ರಮಕೈಗೊಳ್ಳದಿದ್ದಲ್ಲಿ ಊರವರನ್ನು ಒಟ್ಟು ಸೇರಿಸಿ ಪ್ರತಿಭಟನೆಗೆ ಮುಂದಾಗಬೇಕಾದಿತು ಎಂದು ಪಂಚಾಯತ್ ವಾರ್ಡ್ ಸದಸ್ಯೆ ಜಯಲಕ್ಷಿ÷್ಮÃ ಭಟ್ ತಿಳಿಸಿದ್ದಾರೆ


Share with

Leave a Reply

Your email address will not be published. Required fields are marked *