ಮರ ಮುರಿದು ಬಿದ್ದು ಕೂಲಿ ಕಾರ್ಮಿಕನ ಮನೆ ಹಾನಿ: ಕುಟುಂಬ ಅಪಾಯದಿಂದ ಪಾರು

Share with

ಬಂದ್ಯೋಡು: ಮರ ಮುರಿದು ಬಿದ್ದು  ಬಿದ್ದು ಮನೆ ಹಾನಿಗೊಂಡು ಮನೆಯವರು ಅಪಾಯದಿಂದ ಪಾರಾದ ಘಟನೆ ನಡೇದಿದೆ. ಮುಟ್ಟಂ ಸಮೀಪದ  ಶಿರಿಯ ಜುಮಾ ಮಸೀದಿ ಬಳಿಯ ನಿವಾಸಿ ಕೂಲಿ ಕಾರ್ಮಿಕ ಮೊಯಿದೀನ್ ಎಂಬವರ ಹೆಂಚು ಹಾಸಿದ ಮನೆಗೆ ರಾತ್ರಿ ೭.೩೦ರ ವೇಳೆ ರಸ್ತೆ ಬದಿಯ ಆಲದ ಮರದ ಬೃಹತ್ ರೆಂಬೆ ಮುರಿದು ಬಿದ್ದು ಅರ್ಧ ಭಾಗ ಮನೆ ಹಾನಿಗೀಡಾಗಿದೆ. ಶಬ್ದ ಕೇಳಿ ಮಕ್ಕಳ ಸಹಿತ ಮನೆಯವರು ಹೊರಕ್ಕೆ ಓಡಿ ಹೋಗಿದ್ದುದರಿಂದ ಅಪಾಯ ತಪ್ಪಿದೆ. ಉಪ್ಪಳ ಅಗ್ನಿ ಶಾಮಕ ದಳ ಹಾಗೂ ಊರವರು ಸೇರಿ ಮರವನ್ನು ಕಡಿದು ತೆರವುಗೊಳಿಸಲಾಗಿದೆ.


Share with

Leave a Reply

Your email address will not be published. Required fields are marked *