ಉಪ್ಪಳ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯ ಹಿಂದು ವಿರೋಧಿ ಹೇಳಿಕೆ ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃ ಶಕ್ತಿ, ದುರ್ಗಾವಾಹಿನಿ ಮಂಗಲ್ಪಾಡಿ ಖಂಡ ಸಮಿತಿ ವತಿಯಿಂದ ಉಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ. ಜುಲೈ.. 5 ರಂದು ಸಂಜೆ ೬.೩೦ ಕ್ಕೆ ನಡೆಯಲಿದೆ. ಮೆರವಣಿಗೆಯು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಿಂದ ಹೊರಟು ಉಪ್ಪಳ ಪೇಟೇಯಲ್ಲಿ ಸಮಾಪ್ತಿಗೊಳ್ಳಲಿದೆ. ವಿ.ಎಚ್.ಪಿ ಕೇರಳ ರಾಜ್ಯ ಕಾರ್ಯದರ್ಶಿ ವಿ.ಆರ್ ರಾಜಶೇಖರ್ ದಿಕ್ಸೂಚಿ ಭಾಷಣ ಮಡುವರು. ಎಲ್ಲಾ ಕಾರ್ಯಕರ್ತರು , ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.