ಉಪ್ಪಳ :ಏಲ ಮೈದಾನವು ಶತಮಾನಗಳ ಕಾಲದಿಂದ ಐಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಉತ್ಸವ ನಡೆಯುವ ಅಂಗಣವಾಗಿರುವುದು ಇಲ್ಲಿನ ಬಹುತೇಕ ನಾಗರಿಕರಿಗೆ ಸ್ಪಷ್ಟ ವಾಗಿ ತಿಳಿದಿರುವ ಸತ್ಯ. ಕ್ಷೇತ್ರದ ಪ್ರಸಿದ್ಧ ಬೆಡಿಕಟ್ಟೆ ಅಲ್ಲದೆ ಇತರ ಎಂಟು ಪ್ರಧಾನ ಕಟ್ಟೆಗಳು ಇಲ್ಲಿ ನೆಲಸಿದ್ದು , ಪ್ರತೀ ಸಂಕ್ರಮಣದಂದು ಪೂಜೆಗಳು ನೆರವೇರುತ್ತದೆ.
ಇತ್ತೀಚೆಗೆ ಸರಕಾರದ ವಿವಿಧ ಕಛೇರಿ ಗಳ ಅಧಿಕಾರಿಗಳು ಐಲ ಮೈದಾನಕ್ಕೆ ಆಗಮಿಸಿ ತಾಲೂಕು ಆಫೀಸು ಇತರ ಹಲವು ಸರಕಾರಿ ಕಛೇರಿಗಳನ್ನು ಇಲ್ಲಿ ಸ್ಥಾಪಿಸುವ ಬಗ್ಗೆ ಹುನ್ನಾರ ನಡೆಸುತ್ತಿರುವುದು ಕ್ಷೇತ್ರದ ಭಕ್ತವೃಂದದ ಗಮನಕ್ಕೆ ಬಂದಿರುತ್ತದೆ . ಈ ನಿಟ್ಟಿನಲ್ಲಿ ಇತ್ತೀಚೆಗೆ ಕ್ಷೇತ್ರದಲ್ಲಿ ಸೇರಿದ ಐಲ ಮೈದಾನ ಸಂರಕ್ಷಣ ಸಮಿತಿಯು ಐಲ ಮೈದಾನವನ್ನು ಉಳಿಸುವ ಬಗ್ಗೆ ದೃಢ ಸಂಕಲ್ಪ ನಡೆದಿದೆ.
*ಅದನ್ನು ಸಂರಕ್ಷಿಸುವ ಬಗ್ಗೆ ಕಾರ್ಯಕರ್ತರ ಸಮಿತಿಯು ಸಭೆ ಸೇರಿ ಜುಲಾಯಿ 21 ರಂದು ಐಲ ಕಲಾಭವನದಲ್ಲಿ ಬೃಹತ್ ಸಭೆಯನ್ನು ನಡೆಸುವ ಬಗ್ಗೆ ಸಿದ್ಧತೆ ನಡೆಸಿರುತ್ತದೆ.
ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೊಡಿಬೈಲು ನಾರಾಯಣ ಹೆಗ್ಡೆ, ಹಾಗೂ ಮೊಕ್ತೇಸರ ಮಂಡಳಿಯವರು ಸಭೆಯಲ್ಲಿ ಸಲಹೆ ಸೂಚನೆ ನೀಡಿದರು. ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ವಿಜಯಕುಮಾರ್ ರೈ ವಿಷಯವನ್ನು ಪ್ರಸ್ತಾಪಿಸಿದರು . ವೀರಪ್ಪ ಅಂಬಾರು ಧಾರ್ಮಿಕ ಸಾಮಾಜಿಕ ಮುಂದಾಳು ಮಾತನಾಡಿದರು. ಸಂಚಾಲಕರಾದ ಮೋಹನ್ ದಾಸ್ ಐಲ ಸ್ವಾಗತಿಸಿ ವಂದಿಸಿದರು*