ಧರ್ಮತ್ತಡ್ಕ ಗ್ರಂಥಾಲಯದಲ್ಲಿ ವಾಚನ ಪಕ್ಷಾಚರಣೆಅಂಗವಾಗಿ ವಿವಿಧ ಕಾರ್ಯಕ್ರಮ

Share with

ಧರ್ಮತ್ತಡ್ಕ : ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ ರಿ ಧರ್ಮತ್ತಡ್ಕ ಇದರ ಆಶ್ರಯದಲ್ಲಿ ವಾಚನ ಪಕ್ಷಾಚರಣೆ ಅಂಗವಾಗಿ ವಿ.ಸಂಬಶಿವನ್ ಸಂಸ್ಮರಣೆ ಮತ್ತು ಪುಸ್ತಕ ವಿಮರ್ಶೆ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ರವಿಲೋಚನ ಸಿಯಚ್ ರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಕಾರ್ಯಕಾರಿ ಸಮಿತಿ ಸದಸ್ಯರಾದ ದಾಸಪ್ಪ ಮಾಸ್ತರ್ ಉದ್ಘಾಟಿಸಿದರು. ಧರ್ಮತ್ತಡ್ಕ ಶಾಲಾ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್ ವಿ.ಸಾಂಬಶಿವನ್ ಅವರ ಸಂಸ್ಮರಣೆ ಮಾಡಿದರು. ಪ್ರೊ. ಪಿ.ನ್. ಮೂಡಿತ್ತಾಯ ಮೊಗಸಾಲೆ ಯವರ ನೀರು, ಧರ್ಮ ಯುದ್ದ ಪುಸ್ತಕವನ್ನು ವಿಮರ್ಶೆ ಮಾಡಿದರು. ಧರ್ಮತ್ತಡ್ಕ ಶಾಲಾ ಮೆನೇಜರ್ ಶಂಕರ ನಾರಾಯಣ ಭಟ್ ರವರು ಶುಭವನ್ನು ಹಾರೈಸಿದರು. ಸಂಘದ ಉಪಾಧ್ಯಕ್ಷರಾದ ರಾಮಮೋಹನ ಸಿಯಚ್ ಸ್ವಾಗತಿಸಿ, ಸಂಘದ ಸದಸ್ಯರಾದ .ನಿವೇದಿತಾ ಟೀಚರ್ ಧನ್ಯವಾದವಿತ್ತರು. ಕಾರ್ಯಕ್ರಮ ನ್ನು ಸಂಘದ ಸದಸ್ಯರಾದ ಸತೀಶ್ ಮಾಸ್ತರ್ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.


Share with

Leave a Reply

Your email address will not be published. Required fields are marked *