ಕಾಸರಗೋಡು: ಗೋವಾಕ್ಕೆ ರಬ್ಬರ್ ಎಸ್ಟೇಟ್ನಲ್ಲಿ ಕೆಲಸ ಮಾಡಲು ಹೋಗಿದ್ದ ಅಡೂರು ನಿವಾಸಿಯೊಬ್ಬರು ಕಾಣೆಯಾಗಿದ್ದಾರೆ ಎಂಬ ದೂರು ದಾಖಲಾಗಿದೆ. ಅಡೂರು ನಾಗತ್ ಮೂಲೆಯ ಕನನನ ಮಗನಾದ ಮರುವನ್ (45) ಕಾಣೆಯಾಗಿರುವ ವ್ಯಕ್ತಿಯಾಗಿದ್ದಾರೆ.

ಜುಲೈ 17ರಂದು, ಅವರು ಊರಿನ ಏಳು ಜನರೊಂದಿಗೆ ಕೆಲಸಕ್ಕಾಗಿ ಗೋವಾಕ್ಕೆ ತೆರಳಿದ್ದರು. ನಂತರ, ಗೆಳೆಯನೊಂದಿಗೆ ಊರಿಗೆ ಹಿಂದಿರುಗುವಾಗ ಮಡಗಾಂವ್ ಎಂಬ ಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂಬುದಾಗಿ ಸಹೋದರ ಚಂದ್ರನ್ ಅವರು ಅಡೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರೊಂದಿಗೆ ಇದ್ದ ವ್ಯಕ್ತಿ ಊರಿಗೆ ಮರಳಿ ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ದೂರು ಆಧಾರವಾಗಿ ಅಡೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.




