ಕಾಸರಗೋಡಿನ ಅಡ್ಕತ್ತಬೈಲ್, ಮಂಜೇಶ್ವರ ಭಾಗದ ಹಲವು ಕಡೆ ಫೂಟ್ ಓವರ್ ಬ್ರಿಡ್ಜ್ ನಿರ್ಮಿಸಲು ಕೇಂದ್ರ ಸಚಿವರಿಗೆ ಮನವಿ

Share with

ನವದೆಹಲಿ: ಕಾಸರಗೋಡು ಜಿಲ್ಲೆಯ ಹಲವಾರು ಕಡೆ ಪಾದಚಾರಿಗಳಿಗೆ ರಸ್ತೆ ದಾಟಲು ಅನಾನುಕೂಲವಾಗುತ್ತಿದೆ. ಕಾಸರಗೋಡಿನ ಅಡ್ಕತ್ತಬೈಲ್,ಮಂಜೇಶ್ವರ ಭಾಗದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಬಳಿ, ಹಾಗೂ ಬoಗ್ರಮಂಜೇಶ್ವರದಲ್ಲಿ ಫೂಟ್ ಓವರ್ ಬ್ರಿಡ್ಜ್ (Foot over Bridge ) ನಿರ್ಮಿಸಲು ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ ವಿಜಯ ರೈ ಅವರು ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಸಾರಿಗೆ ಸಚಿವರ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು. ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ಅವರು ಜತೆಯಲ್ಲಿದ್ದರು.


Share with

Leave a Reply

Your email address will not be published. Required fields are marked *