ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ನಂತರ ನಗರಗಳಿಗೆ ವಲಸೆ ಹೋಗದೆ ತಮ್ಮ ಗ್ರಾಮದ ಏಳಿಗೆಗೆ ಬಯಸುವ ಯುವ ಸಮುದಾಯಕ್ಕೆ ಸ್ಫೂರ್ತಿ 22 ವರ್ಷದ ಈ ಸಾಕ್ಷಿ ರಾವತ್.

ಪಂಚಾಯ್ತಿ ಅಧ್ಯಕ್ಷೆಯಾಗಿ ಗ್ರಾಮದ ಅಭಿವೃದ್ಧಿ ಮಾಡಬೇಕೆಂದು ಬಯಸಿದ್ದ ಸಾಕ್ಷಿಗೆ ಜನರ ಬೆಂಬಲ ಸಿಕ್ಕಿತು. ಉತ್ತರಾಖಂಡದ ಕುಯಿ ಗ್ರಾಮದಲ್ಲಿ ಸರಪಂಚರಾಗಿ ಚುನಾವಣೆಯಲ್ಲಿ ಗೆದ್ದರು. ಶಿಕ್ಷಣ, ಆರೋಗ್ಯ, ಗ್ರಾಮೀಣ ಉದ್ಯೋಗದ ಮೇಲೆ ಗಮನ ಕೇಂದ್ರೀಕರಿಸಿ ಯುವ ಶಕ್ತಿಯೊಂದಿಗೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುವುದಾಗಿ ಅವರು ಹೇಳಿದರು.




