ಉಪ್ಪಳ: ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರ 16ನೇ ವಾರ್ಷಿಕೋತ್ಸವ ಮತ್ತು ಚಂಡಿಕಾ ಹೋಮ ವಿವಿಧ ಕಾಯಕ್ರಮಗಳೊಂದಿಗೆ ಸಮಾಪ್ತಿಗೊಂಡಿತು. ಇದರ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕಟೀಲು ಕ್ಷೇತ್ರದ ಶ್ರೀ ಹರಿನಾರಾಯಣ ದಾಸ ಅಸ್ತ್ರಣ್ಣಾಯರು, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ನೇಪಾಳ ಪಶುಪತಿ ದೇವಸ್ಥಾನದ ಅರ್ಚಕ ಶ್ರೀರಾಮ ಕಾರಂತ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಶ್ರೀಧರ್ ಶೆಟ್ಟಿ ಮುಟ್ಟಂ, ಕಟೀಲು ಮೇಳದ ಭಾಗವತ ಪ್ರಕಾಶ್ ರಾವ್, ಮಂದಿರದ ಕಾರ್ಯಾಧ್ಯಕ್ಷ ವೆಂಕಟ್ರಮಣ ಮೂಡಿತ್ತಾಯ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಡಾ.ಎಂ.ಎಸ್ ರವರಿಗೆ ಹುಟ್ಟೂರ ಸನ್ಮಾನವನ್ನು ವೇದಿಕೆಯಲ್ಲಿರುವ ಗಣ್ಯರು ನೆರವೇರಿಸಿದರು. ಸುಂದರ ಕನ್ನಟಿಜಾಲು ಹಾಗೂ ಚಂದ್ರಶೇಖರ ಶೆಟ್ಟಿಗಾರ್ ರವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಪಿ ಎನ್ ಮೂಡಿತ್ತಾಯ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಸುದರ್ಶನ ಪಾಣಿ ಬಲ್ಲಾಳ್ ವಂದಿಸಿದರು . ಕು.ಯಶೋಧರ ಪ್ರಾರ್ಥನೆ ಹಾಡಿದರು. ಅನಂತ ಮೂಡಿತ್ತಾಯ, ಗಣೇಶ ಆಚಾರ್ಯ ನಿರೂಪಿಸಿದರು.