ಮಂಜೇಶ್ವರ: ಅಯೋದ್ಯ ನಗರಿಯಲ್ಲಿ ಜ.22ರಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವ ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ಅಯೋದ್ಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪೂಜಿಸಿ ತಂದಂತಹ ಮಂತ್ರಾಕ್ಷತೆಯನ್ನು ದೈಗೋಳಿ ರಾಮಕೃಷ್ಣ ಭಜನಾ ಮಂದಿರದ ಸದಸ್ಯರಿಂದ ಮನೆ ಮನೆಗೆ ತಲುಪಿಸುವಂತಹ ಕಾರ್ಯಕ್ರಮಕ್ಕೆ ವಿದ್ವಾನ್ ರಾಮ್ ಭಟ್ ಬೋಳಂತ ಕೋಡಿ ಅವರು ಚಾಲನೆ ನೀಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ ಭಟ್ ಹಾಗೂ ಶಂಕರ ನಾರಾಯಣ ಭಟ್, ಧಾರ್ಮಿಕ ಮುಖಂಡ ಸಂತೋಷ್ ಶೆಟ್ಟಿ ದೈಗೋಳಿ, ಲೀಲಾ ಮಯ್ಯ, ಯಶೋಧ ದೈಗೋಳಿ, ಮಾಧವ ಶೆಟ್ಟಿಗಾರ್ ದೈಗೋಳಿ, ಲಲಿತಾ ದೈಗೋಳಿ, ಜಯಶ್ರೀ ದೈಗೋಳಿ ಉಪಸ್ಥಿತರಿದ್ದರು.




