ಕುಂಬಳೆ: ಅಮೆತ್ತೋಡು ಶ್ರೀ ಧೂಮಾವತಿ ಯಕ್ಷಗಾನ ಕಲಾಸಂಘದಿಂದ ನಾಟ್ಯ ತರಬೇತಿಗೆ ಚಾಲನೆ

Share with

ಕುಂಬಳೆ: ಶ್ರೀ ಧೂಮಾವತಿ ಯಕ್ಷಗಾನ ಕಲಾಸಂಘ ಅಮೆತ್ತೋಡು ದಂಡೆಗೋಳಿ ಇವರು ಆಯೋಜಿಸಿದ ನಾಲ್ಕನೇ ತಂಡದ ಯಕ್ಷಗಾನ ನಾಟ್ಯ ತರಬೇತಿಯನ್ನು ಶ್ರೀ ರಾಮ ಭಜನಾ ಮಂದಿರ ಅಬಿಲಡ್ಕದಲ್ಲಿ ಆರಂಭಿಸಲಾಯಿತು.

ನಾಟ್ಯ ಗುರುಗಳಾದ ಧರ್ಮೇಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಮಂದಿರದ ಅಧ್ಯಕ್ಷರಾದ ಬಾಬು.ಯು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾಟ್ಯ ಗುರುಗಳಾದ ಧರ್ಮೇಂದ್ರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಶಂಕರ ಪಾಟಾಳಿ ಅಂಬಿಲಡ್ಕ ಮತ್ತು ವಸಂತ ಶ್ರಾವಣಕೆರೆ ಉಪಸ್ಥಿತರಿದ್ದರು. ಹರೀಶ್ ಅಂಬಿಲಡ್ಕ ಸ್ವಾಗತಿಸಿ ರವಿಚಂದ್ರ ತಿರ್ತೊಡಿ ವಂದಿಸಿದರು. ರಮೇಶ್ ಶ್ರಾವಣಕೆರೆ ಕಾರ್ಯಕ್ರಮವನ್ನು ನಿರೂಪಿಸಿದರು.


Share with

Leave a Reply

Your email address will not be published. Required fields are marked *