
ಶ್ರೀ ಕ್ಷೇತ್ರ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ವರ್ಷಾವಧಿಯ ‘ಮಕರ ಸಂಕ್ರಮಣ’ ಉತ್ಸವವು ಜ.14ರಿಂದ 16ರ ವರೆಗೆ ವೈಭವದಿಂದ ನಡೆಯಲಿದೆ.

ಜ.14ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವಲ ಸನ್ನಿಧಿಯಲ್ಲಿ ‘ಮಹಾಮಂಗಳಾರತಿ’ ಮತ್ತು ರಾತ್ರಿ 10.30ಕ್ಕೆ ‘ಗೆಂಡ ಸೇವೆ’ ನಡೆಯಲಿದೆ.
ಜ.15ರಂದು ಬೆಳಗ್ಗೆ 9.30ಕ್ಕೆ ‘ಮಹಾಮಂಗಳಾರತಿ’, ತದನಂತರ ‘ಮಂಡಲ ಸೇವೆ’, ರಾತ್ರಿ 8ಕ್ಕೆ ‘ಕಡಬು ನೈವೇದ್ಯ’, ‘ಮಹಾಮಂಗಳಾರತಿ’ಗಳು ನಡೆಯಲಿವೆ.
ರಾತ್ರಿ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ‘ಯಕ್ಷಗಾನ ಸೇವೆ ಆಟ’ ಜರುಗಲಿದೆ.
ಜ.17ರಂದು ಬೆಳಗ್ಗೆ ಗಂಟೆಗೆ ಸಂಪ್ರೋಕ್ಷಣೆ ನಡೆಯಲಿದೆ. ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಸಹಭಾಗಿಗಳಾಗಿ, ಶ್ರೀ ಬ್ರಹ್ಮಲಿಂಗೇಶ್ವರ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕು ಎಂದು ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತಸರ ಸಿ.ಸದಾಶಿವ ಶೆಟ್ಟಿ ಮತ್ತು ಚಿತ್ತೂರು ಗುಡಿಕೇರಿ ಮನೆ ಕುಟುಂಬಸ್ಥರು ಹಾಗೂ ಕ್ಷೇತ್ರದ ಅರ್ಚಕ ವೃಂದ, ದರ್ಶನ ಪಾತ್ರಿಗಳು, ಸಿಬ್ಬಂದಿ, ಊರ ಸಮಸ್ತರು ಆಪೇಕ್ಷಿಸಿದ್ದಾರೆ.
.ಮಾರಣಕಟ್ಟೆ ದೇವಾಲಯದಲ್ಲಿ ನಿತ್ಯ ಸಂಜೆ ರಂಗಪೂಜೆ ಸೇವೆ ವಿಶಿಷ್ಟ. ದೇವಳಕ್ಕೆ ಆಗಮಿಸಿದ ಭಕ್ತರಿಗೆ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತಿದೆ.
ಇಲ್ಲಿನ ಬ್ರಹ್ಮಲಿಂಗೇಶ್ವರ ದೇವರು ಭಕ್ತರ ಹರಕೆಗೆ ಶೀಘ್ರ ಒಲಿಯುತ್ತಾನೆ. ವರ್ಷಂಪ್ರತಿ ನಡೆಯುವ ಗೆಂಡ ಸೇವೆ ಹರಕೆ ಇಲ್ಲಿನ ಇನ್ನೊಂದು ವೈಶಿಷ್ಟ್ಯ. ಇದರಲ್ಲಿ ಪ್ರತಿವರ್ಷ ನೂರು ಮಂದಿ ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಇಷ್ಟಾರ್ಥ ನೆರವೇರಿಕೆಯ ಹರಕೆ ತೀರಿಸುತ್ತಾರೆ.
ಶ್ರೀ ಕ್ಷೇತ್ರದಲ್ಲಿ ನಾಡಿನ ಪ್ರಸಿದ್ಧ ಮೂರು ದಶಾವತಾರ ಮೇಳಗಳಿದ್ದು, ಪ್ರತಿವರ್ಷವೂ ದಿನಂಪ್ರತಿ ಎಂಬಂತೆ ಹರಕೆಯ ಯಕ್ಷಗಾನ ಪ್ರದರ್ಶನಗಳು ಕರಾವಳಿಯುದ್ದಕ್ಕೂ ನಡೆಯುತ್ತವೆ.




