ಯಕ್ಷಗಾನ ಕ್ಷೇತ್ರದ ಮದ್ದಲೆಗಾರ ಬಿ.ಗೋಪಾಲಕೃಷ್ಣ ಕುರುಪ್‌ ನಿಧನ

Share with

ಯಕ್ಷಗಾನ ಕ್ಷೇತ್ರದ ಮದ್ದಲೆಗಾರ  ಬರ್ಗುಳ ಗೋಪಾಲಕೃಷ್ಣ ಕುರುಪ್‌  (90ವ)  ಮಾ.19 ರಂದು ನಿಧನರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಲ್ಲಿ ಇವರು ನೆಲೆಸಿದವರು. ಮೂಲತಃ ಇವರು ಕೇರಳದವರು.

ಗೋಪಾಲಕೃಷ್ಣ ಕುರುಪ್‌ ಅವರು ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದರು. ಅದನ್ನು ಪಠ್ಯರೂಪದಲ್ಲಿ ಪ್ರಕಟಿಸಿದವರಲ್ಲಿ ಇವರು ಮೊದಲಿಗರು. ಭಾಗವತಿಕೆಯ ಜ್ಞಾನ ಕೂಡಾ ಇವರಿಗಿತ್ತು. 1952 ಇವರು ಯಕ್ಷಗಾನ ಕ್ಷೇತ್ರವನ್ನು ಪ್ರವೇಶ ಮಾಡಿದರು.


Share with

Leave a Reply

Your email address will not be published. Required fields are marked *