ಪೈವಳಿಕೆ : ಸಿಪಿಎಂ ಕುಡಾ ಲು ಮೇರ್ಕಳ ಲೋಕಲ್ ಸಮ್ಮೇಳನ ಜರಗಿತು. ಪೊಸಡಿ ಗುಂಪೆಯನ್ನು ಇನ್ನಷ್ಟು ಆಕರ್ಷಣೆ ಗೊಳಿಸಲು ಅಬಿವೃದ್ದಿ ಪ್ಯಾಕೇಜ್ ನಲ್ಲಿ ಸೇರಿಸಬೇಕು ಎಂದು ಸಮ್ಮೇಳನ ಆಗ್ರಹಿಸಿದೆ. ಭಾರತಿ.ಜೆ ಶೆಟ್ಟಿ ಸಮ್ಮೇಳನವನ್ನು ನಿಯಂತ್ರಿಸಿದರು. ತಿಮ್ಮಣ್ಣ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ರಘುದೇವ್ ಮಾಸ್ಟರ್ ,ಏರಿಯಾ ಸಮಿತಿ ಸದಸ್ಯರಾದ ಹಾರಿಸ್ ಪೈವಳಿಕೆ, ಅಶೋಕ್ ಭಂಡಾರಿ,ಬೇಬಿ ಶೆಟ್ಟಿ ಭಾಗವಹಿಸಿದರು. 9 ಮಂದಿಯ ಲೋಕಲ್ ಸಮಿತಿ ಆಯ್ಕೆ ಮಾಡಲಾಯಿತು ಬಿ. ಎ ಬಶೀರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು.