ಉಪ್ಪಳ: ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ 2.11.2024 ನೇ ಶನಿವಾರ ಬದಿಯಡ್ಕದಲ್ಲಿ ನಡೆಯಲಿರುವ ಗೋಪೂಜೆ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆ ಯನ್ನು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಉದ್ಯಮಿ ಹಾಗೂ ಧಾರ್ಮಿಕ ಮುಂದಾಳು ಎಸ್ ಎನ್ ಮಯ್ಯ ಬದಿಯಡ್ಕ ಬಿಡುಗಡೆಗೊಳಿಸಿದರು. ಈ ವೇಳೆ ಮಂಜುನಾಥ ಮಾನ್ಯ ಜಿಲ್ಲಾ ಸಾಮಾಜಿಕ ಸಾಮರಸ್ಯ ಪ್ರಮುಖ್ ಕಾರ್ಯ ಕ್ರಮಕ್ಕೆ ಸ್ವಾಗತ ನೀಡಿದರು. ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಪ್ರಾಂತ ಸತ್ಸಂಗ ಸಹ ಸಂಯೋಜಕ , ಲಕ್ಷ್ಮಣ ಪ್ರಭು ಬದಿಯಡ್ಕ ಶುಭಾಸಂಸನೆ ಗೈದರು,. ಹರಿಪ್ರಸಾದ್ ರೈ ಪುತ್ರಕಳ ಜಿಲ್ಲಾ ಪ್ರಮುಖ್ , ನರೇಂದ್ರ ಬದಿಯಡ್ಕ ಧಾರ್ಮಿಕ ಮುಂದಾಳು , ಸಂತೋಷ್ ರೈ ಗಾಡಿಗುಡ್ಡೆ ವಿ ಹಿಂ ಪ ಕುಂಬ್ದಾಜೆ ಖಂಡ ಸಮಿತಿ ಅಧ್ಯಕ್ಷರು , ಸುನಿಲ್ ಕಿನ್ನಿಮಾಣಿ ವಿಹಿಂಪ ಪ್ರಖಂಡ ಅಧ್ಯಕ್ಷರು ಉಪಸ್ಥಿತರಿದ್ದರು , ರಮೇಶ್ ಕೃಷ್ಣ ಪದಾರ್ ಪ್ರಖಂಡ ಕಾರ್ಯದರ್ಶಿ ಧನ್ಯವಾದ ನೀಡಿದರು