ವಿಷಪೂರಿತ ಹಾವು ಕಡಿದು ಚಿಕಿತ್ಸೆಯಲ್ಲಿದ್ದ  ಕೂಲಿ  ಕಾರ್ಮಿಕ ಮೃತ್ಯು

Share with


ಮಂಜೇಶ್ವರ : ವಿಷಪೂರಿತ ಹಾವು ಕಡಿದು ಗಂಭಿರವಸ್ಥೆಯಲ್ಲಿ  ಚಿಕಿತ್ಸೆಯಲ್ಲಿದ್ದ  ಕೂಲಿ ಕಾರ್ಮಿಕ  ಮೃತಪಟ್ಟ  ಘಟನೆ  ನಡೆದಿದೆ.  ಮಿಯಾಪದವು  ಪಳ್ಳ ತ್ತಡ್ಕ ನಿವಾಸಿ (ದಿ ) ದಾದು ಮೂಲ್ಯ ರವರ ಪುತ್ರ  ಅಶೋಕ (43)  ಗುರುವಾರ ಮುಂಜಾನೆ 4ಗಂಟೆಗೆ  ಮಂಗಳೂರು  ಕಂಕನಾಡಿ  ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾರೆ. ಈ ತಿಂಗಳ 18ರಂದು  ರಾತ್ರಿ ಸುಮಾರು 8ಗಂಟೆ ವೇಳೆ ಮನೆಯ  ಅಂಗಳದಲ್ಲಿ ಹಾವು ಕಡಿದಿತ್ತೆ ನ್ನಾಲಾಗಿದೆ ಕೂಡಲೇ  ಅವರನ್ನು  ಕಂಕನಾಡಿ  ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಒಂದು  ವಾರದಿಂದ ಆಸ್ಪತ್ರೆಯ  ತುರ್ತು ನಿಗಾ ವಿಭಾಗದಲ್ಲಿ  ದಾಖಲಿಸಿ  ಚಿಕಿತ್ಸೆ ನೀಡಿದರೂ  ಫಲಕಾರಿಯಾಗದೆ  ಮೃತಪಟ್ಟರು.ಮೃತರು  ತಾಯಿ  ಲಲಿತ,  ಪತ್ನಿ ಪ್ರಮೀಳಾ. ಮಕ್ಕಳಾದ ಪ್ರಜ್ವಲ್, ಧನ್ಯ, ಸಹೋದರ ಸಹೋದರಿಯರಾದ  ಪ್ರಕಾಶ, ರವಿ, ಪ್ರೇಮ, ಮಮತಾ, ಹೇಮಲತಾ, ರೇಖಾ ಹಾಗೂ ಅಪಾರ  ಬಂಧು ಮಿತ್ರರನ್ನು  ಅಗಲಿದ್ದಾರೆ


Share with

Leave a Reply

Your email address will not be published. Required fields are marked *