
ಕಾಸರಗೋಡು: ತಂದೆಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ
ಪುತ್ರ ಅನೀಶ್ (36) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ) ತೀರ್ಪು ನೀಡಿದೆ.

2019ರ ಜೂ. 28ರಂದು ಮಾಲೋಂ ಅದಿರಾಂಬು ಕಾಲನಿಯ ದಾಮೋದರನ್(63) ಅವರ ಕೊಲೆಗೆ ಯತ್ನ ನಡೆದಿರುವುದಾಗಿ ಚಿತ್ತಾರಿಕ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.




