ಕಾಞಂಗಾಡ್: ಬಿಜೆಪಿಯ ಹಿರಿಯ ಮುಖಂಡ ಅಡ್ಡ ಕೆ.ಕೆ.ನಾರಾಯಣನ್ (71) ನಿಧನರಾದರು. ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

ನೀಲೇಶ್ವರ ಗ್ಯಾಸ್ ಏಜನ್ಸಿಯ ಮಾಲಕರಾಗಿದ್ದ ಅವರು ಕಾಞಂಗಾಡ್ ನೆಹರೂ ಕಾಲೇಜು ಆಡಳಿತ ಸಮಿತಿಯ ನಿರ್ದೇಶಕರಾಗಿದ್ದರು. ಈ ಹಿಂದೆ ಕೆ.ಪಿ.ಸಿ.ಸಿ ಸದಸ್ಯರಾಗಿದ್ದು ಅನಂತರ ಬಿಜೆಪಿಗೆ ಸೇರ್ಪಡೆಗೊಂಡರು. ಇದೀಗ ಎನ್.ಡಿ.ಎ.ಕಾಞಂಗಾಡ್ ವಿಧಾನಸಭಾ ಅಧ್ಯಕ್ಷರಾಗಿದ್ದಾರೆ.
ಮೃತರು ಪತ್ನಿ ಸುಶೀಲ, ಪುತ್ರಿ ಕಾರ್ತಿಕ, ಅಳಿಯ ಆದರ್ಶ್, ಸಹೋದರ ಸಹೋದರಿಯರಾದ ಡಾ.ಗಂಗಾಧರನ್, ರಾಜಮೋಹನ್, ಅಡ್ವ.ರತ್ನಕುಮಾರಿ, ಗೀತಾ, ನಿರ್ಮಲಾ ದೇವಿ ಎಂಬವರನ್ನು ಅಗಲಿದ್ದಾರೆ.




