ಉಡುಪಿ: ಸ್ಕೂಟರ್ ಢಿಕ್ಕಿ ಹೊಡೆದು ಮಹಿಳೆಯರಿಬ್ಬರು ಗಾಯಗೊಂಡ ಘಟನೆ ಎಂಜಿಎಂ ಕಾಲೇಜು ಬಳಿ ಸಂಭವಿಸಿದೆ.

ಸಂದೇಶ್ ಎಂಬವರು ತನ್ನ ಸ್ಕೂಟರಿನಲ್ಲಿ ಸುರಾಜ್ ಅವರನ್ನು ಕುಳ್ಳಿರಿಸಿಕೊಂಡು ಉಡುಪಿಯಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದಾಗ ರಸ್ತೆ ದಾಟುತ್ತಿದ್ದ ಭಾರತಿ (74) ಮತ್ತು ಸುಮನಾ ಅವರಿಗೆ ಢಿಕ್ಕಿ ಹೊಡೆಯಿತು. ಭಾರತಿ ಮತ್ತು ಸುಮನಾ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಸವಾರನ ವಿರುದ್ಧ ಸಂಚಾರ ಠಾಣೆಯಲ್ಲಿ ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಾಗಿದೆ.




