ತಮಗೆ ಶುಭಾಶಯ ತಿಳಿಸಿ ಟ್ವಿಟ್ ಮಾಡಿದ ಪ್ರಧಾನಿ ಮೋದಿ ಅವರಿಗೆ ಟಿವಿಕೆ ಮುಖ್ಯಸ್ಥ ವಿಜಯ್ ಪ್ರತಿಕ್ರಿಯಿಸಿದ್ದಾರೆ. ‘ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಜನರ ಕಲ್ಯಾಣವೇ ನಮ್ಮ ಏಕೈಕ ಗುರಿ. ರಾಜಕೀಯವನ್ನು ಮೀರಿ ತಮಿಳುನಾಡು ಜನರ ಯೋಗಕ್ಷೇಮದತ್ತ ಗಮನಹರಿಸಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದಿದ್ದಾರೆ.

ಇನ್ನೊಂದೆಡೆ, ತಮಗೆ ವೈಯಕ್ತಿಕವಾಗಿ ಫೋನ್ ಮಾಡಿ ಅಭಿನಂದಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ವಿಜಯ್ ಧನ್ಯವಾದ ತಿಳಿಸಿದ್ದಾರೆ.




