ಹತ್ತೂರ ಒಡೆಯ ಪುತ್ತೂರು ಶ್ರೀ   ಮಹಾಲಿಂಗೇಶ್ವರನ ಜಾತ್ರೆಗೆ ಪೂರ್ವಭಾವಿ ಸಿದ್ಧತೆಗಳು ಪ್ರಾರಂಭ!

Share with

ಪುತ್ತೂರು : `ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದವಾರ್ಷಿಕ ಜಾತ್ರಾಮಹೋತ್ಸವ ಎ.1೦ರಿಂದ 2೦ ತನಕ ನಡೆಯಲಿದ್ದು, ಈ ಸಂಬಂಧ ಬ್ರಹ್ಮರಥ ಸಿದ್ಧಗೊಳಿಸಲು ಸೋಮವಾರ ರಥವನ್ನು ಪೂಜಾವಿಧಿವಿಧಾನಗಳೊಂದಿಗೆ ರಥಬೀದಿಗೆ ತರಲಾಯಿತು.



ಈ ಸಂದರ್ಭ ರಥಕಟ್ಟುವ ಸ್ಥಳವನ್ನು ಮಲ್ಲಿಗೆಮಾಲೆ ಭೂಸ್ಪರ್ಶ ಮಾಡುವ ಮೂಲಕ ನಿಗದಿಪಡಿಸಿತು. ರಥಮನೆಯಿಂದ ರಥಬೀದಿಗೆ ಬ್ರಹ್ಮರಥ ಆಗಮನದೊಂದಿಗೆ ಪುತ್ತೂರು ಜನತೆಗೆ ಜಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಯಿತು ಎಂಬುವುದು ಜನತೆಯ ನಂಬಿಕೆಯಾಗಿದೆ. ಎ.1೦ಕ್ಕೆ ಆರಂಭಗೊಳ್ಳುವ ಪುತ್ತೂರು ಜಾತ್ರೋತ್ಸವದಲ್ಲಿ ಎ.೧೭ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಈ ಜಾತ್ರೋತ್ಸವದಲ್ಲಿ ಸೀಮೆಯ ಭಕ್ತರೂ ಸೇರಿದಂತೆ ದಕ ಜಿಲ್ಲೆಯ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ.


Share with

Leave a Reply

Your email address will not be published. Required fields are marked *