![](https://i0.wp.com/veekshakavani.com/wp-content/uploads/2024/05/IMG-20240527-WA0008.jpg?resize=1024%2C780&ssl=1)
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿಯವರು ಬರೆದಿರುವ ಕಂಬಳ ಲೋಕ ಭಾಗ 3 ನ್ನು ಕಂಬಳ ಕೋಣಗಳ ಮಾಲಕರು,ಪ್ರಗತಿಪರ ಕೃಷಿಕರು ಆಗಿರುವ ಮೂಡುಕೋಣಾಜೆ ಕೊಪ್ಪದೊಟ್ಟು ರಾಘವ ಪಿ ಸುವರ್ಣ, ಸುಮತಿ ದಂಪತಿ ಅನಾವರಣ ಮಾಡಿದರು.
ಪುಸ್ತಕದಲ್ಲಿ ಕಂಬಳ ಕೂಟಗಳಲ್ಲಿ ಪಾಲ್ಗೊಳ್ಳುವ ಕೋಣಗಳ ಮಾಲಕರು, ಓಟಗಾರರು, ಛಾಯಾಗ್ರಹಕರು, ಉದ್ಘೋಷಕರು, ಕೋಣಗಳನ್ನು ಬಿಡಿಸುವವರು, ಹಾಗೂ ಕೋಣಗಳ ಸಾಧನೆಯನ್ನು ಬರೆಯಲಾಗಿದೆ. ಈ ಸಂದರ್ಭದಲ್ಲಿ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.