ಕೊಂಡೆವೂರು ಆಶ್ರಮದ ನಕ್ಷತ್ರ ವನದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ನವಗ್ರಹ ವಿಗ್ರಹದ ಶೋಭಾಯಾತ್ರೆಯ ಮೂಲಕ ಆಗಮನ

Share with

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಮಾರ್ಚ್ ೨೪ರಂದು ಕೊಂಡೆವೂರಿನ ನಕ್ಷತ್ರವನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಶಿಲಾಮಯ ನವಗ್ರಹ ವಿಗ್ರಹದ ಮೆರವಣಿಗೆಯು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಯೊಂದಿಗೆ ಆರಂಭಗೊಂಡು ಹೊಸಂಗಡಿ ಶ್ರೀ ಆಯ್ಯಪ್ಪ ಕ್ಷೇತ್ರಕ್ಕೆ ತಲುಪಿಸಲಾಗಿದೆ.

ಅಲ್ಲಿಂದ ಭಾನುವಾರ ಬೆಳಿಗ್ಗೆ ವಾಹನಗಳ ಮೂಲಕ ಉಪ್ಪಳ ಪೇಟೆಗೆ ಆಗಮಿಸಿ *ಉಪ್ಪಳ ಪೇಟೆಯಿಂದ ಚೆಂಡೆ, ಭಜನೆ ಹಾಗೂ ಪೂರ್ಣ ಕುಂಭ ಸ್ವಾಗತದ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ತಲುಪಿತು. ತದನಂತರ ನವಗ್ರಹಗಳಿಗೆ ಪ. ಪೂಜ್ಯರು ವಿಶೇಷ ಪೂಜೆ ಸಲ್ಲಿಸಿದರು. ಮಾರ್ಚ್ ೨೪ರಂದು ನಡೆಯುವ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದಲ್ಲಿ ಉಪಯೋಗಿಸಲ್ಪಡುವ ನವಧಾನ್ಯ ಹಾಗೂ ಸಮಿತ್ತುಗಳನ್ನು ಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲ್ಲಿಸಿದರು ಬಳಿಕ ಯಾಗದ ಪೂರ್ವಭಾವಿ ‍ ಕಾರ್ಯಕರ್ತರ ವಿಶೇಷ ಸಭೆ ಹಾಗು ವಿವಿಧ ವಿಭಾಗಗಳ ಜವಾಬ್ದಾರಿ ಘೋಷಣೆ ಮಾಡಲಾಯತು.


Share with

Leave a Reply

Your email address will not be published. Required fields are marked *