ಉಪ್ಪಳ: ಮಂಗಲ್ಪಾಡಿ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಮಾ.19ರಿಂದ ಆರಂಭಗೊಂಡು ಈ ತಿಂಗಳ 24ರ ತನಕ ವಿವಿಧ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.19ರಂದು ಬೆಳಿಗ್ಗೆ ಗಣಹೋಮ ಮತ್ತು ಚಪ್ಪರ ಮುಹೂರ್ತ ನಡೆಯಿತು. ಮಧ್ಯಾಹ್ನ ಅನ್ನದಾನ, ಸಂಜೆ 7ಕ್ಕೆ ಭಂಡಾರ ಆರೋಹಣ ಮತ್ತು ನಡೋದಿ ಉತ್ಸವ, ರಾತ್ರಿ ಅನ್ನದಾನ, ಮಾ.20ರಂದು ಬೆಳಿಗ್ಗೆ 11.30ಕ್ಕೆ ನಾಗತಂಬಿಲ, ಮಧ್ಯಾಹ್ನ ಅನ್ನದಾನ, ಮೊದಲ ಕಳಿಯಾಟ ಆರಂಭಗೊಂಡು ವಿವಿಧ ದೈವೊತ್ಸವಗಳು, ಬಿಂಬ ದರ್ಶನ ನಡೆಯಲಿದೆ.