ಫಲಾನುಭವಿಗಳಿಗೆ “ನಿಟಿಲಾಪುರದಿ ಸೇವಾವಾರಿದಿ” ಹಸ್ತಾಂತರ..

Share with

ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ ವತಿಯಿಂದ ಬಂಟ್ವಾಳ ತಾಲೂಕಿನ ಗೋಳ್ತಮುಜಲ್ ಗ್ರಾಮದ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಜಾತ್ರೋತ್ಸವದಲ್ಲಿ ನಿಟಿಲಾಪುರದಿ ಸೇವಾವಾರಿದಿ ಮೂಲಕ ಸಂಗ್ರಹಿಸಲ್ಪಟ್ಟ ರೂಪಾಯಿ 88,101/- ಸೇವಾನಿಧಿಯನ್ನು ಕ್ಷೇತ್ರದಲ್ಲಿ ಪ್ರಮುಖರ ಸಮ್ಮುಖ ಫಲಾನುಭವಿಗಳಾದ ಆರುಷಿ ನೆಟ್ಲರಿಗೆ 30,000 /-, ನಂದಕಿಶೋರ್ ಮಾಣಿಮಜಲ್ ರವರಿಗೆ 25000/-, ಸಂತೋಷ್ ಕಲ್ಲಡ್ಕ ರವರಿಗೆ 25000/-, ಕಾರ್ಯಕರ್ತರ ಕ್ಷೇಮ ನಿಧಿಗೆ 8101/-ನ್ನು ಹಸ್ತಾಂತರಿಸಲಾಯಿತು.

ನಿಟಿಲಾಪುರದಿ ಸೇವಾವಾರಿದಿ ಮೂಲಕ ಸಂಗ್ರಹಿಸಲ್ಪಟ್ಟ ಸೇವಾನಿಧಿಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಪಡೆದುಕೊಂಡ ಫಲಾನುಭವಿಗಳು ಯುವಶಕ್ತಿ ಸೇವಾ ಪಥದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಶಕ್ತಿ ಸೇವಾ ಪಥದ ವತಿಯಿಂದ ಸಮಾಜದಿಂದ ಸಮಾಜಕ್ಕೆ ಈತನಕ ಸುಮಾರು 70 ಲಕ್ಷ ರೂಪಾಯಿಯನ್ನು ವಿವಿಧ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.


Share with

Leave a Reply

Your email address will not be published. Required fields are marked *