ಎ.21ರಂದು ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಸಾರ್ವಜನಿಕ ಸೀಯಾಳ ಅಭಿಷೇಕ ಮತ್ತು ಅಯೋಧ್ಯೆಯ ತೀರ್ಥಾ ವಿತರಣೆ

Share with

ಮಂಜೇಶ್ವರ: ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಇದರ ನೇತೃತ್ವದಲ್ಲಿ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಸೀಯಾಳ ಅಭಿಷೇಕ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮ ದೇವರಿಗೆ ಅಭಿಷೇಕವಾದ ತೀರ್ಥ ವಿತರಣೆ ರಾಮೋತ್ಸವ ಹಾಗೂ ಸತ್ಸಂಗ ಸಭೆ 21-4-2024ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.

ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಸಾರ್ವಜನಿಕ ಸೀಯಾಳ ಅಭಿಷೇಕ ಮತ್ತು ಅಯೋಧ್ಯೆಯ ತೀರ್ಥಾ ವಿತರಣೆ

ಬೆಳಿಗ್ಗೆ 6ಕ್ಕೆ ಶ್ರೀ ದೇವರಿಗೆ ಸಾರ್ವಜನಿಕ ಸೀಯಾಳ ಅಭಿಷೇಕ, 7.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ, ಬೆಳಿಗ್ಗೆ 8ಕ್ಕೆ ಉಪಹಾರ, 8.30ಕ್ಕೆ ಅಯೋಧ್ಯೆಯ ತೀರ್ಥಾ ವಿತರಣೆ ಬಳಿಕ ನಡೆಯುವ ಸತ್ಸಂಗ ಸಭೆಯಲ್ಲಿ ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಕೃಷ್ಣಶಿವಕೃಪಾ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡುವರು.

ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಘಟನೆಯ ಮುಖಂಡರಾದ ಜಯದೇವ ಖಂಡಿಗೆ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸುರೇಶ್ ಶೆಟ್ಟಿ ಪರಂಕಿಲ, ಮೀರಾ ಆಳ್ವಾ, ಯಾದವ ಕೀರ್ತೇಶ್ವರ, ಸೌಮ್ಯ ಪ್ರಕಾಶ್ ಮೊದಲಾದವರು ಭಾಗವಹಿಸುವರು.


Share with

Leave a Reply

Your email address will not be published. Required fields are marked *