ಪೈವಳಿಕೆ: ಬಾಯಿಕಟ್ಟೆ ಶ್ರೀ ವಯನಾಡು ವಿಷ್ಣುಮೂರ್ತಿ ಸೇವಾ ಸಮಿತಿ ಇದರ ಆಶ್ರಯದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಕೆಂಡ ಸೇವಾ ಮಹೋತ್ಸವ ನಾಳೆ [೧೨-೪-೨೦೨೪] ರಂದು ಬಾಯಿಕಟ್ಟೆಯಲ್ಲಿ ನಡೆಯಲಿದೆ. ಬೆಳಿಗ್ಗೆ ೮ಕ್ಕೆ ಮೇಲೇರಿಗೆ ಕೊಳ್ಳಿ ಸೇರಿಸುವುದು, ಸಂಜೆ ೬ಕ್ಕೆ ಮೀಂಜ ಕೋರಿಕ್ಕಾರು ತರವಾಡು ಕ್ಷೇತ್ರದಿಂದ ಭಂಡಾರ ಹೊರಡುವುದು, ರಾತ್ರಿ ೮ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ೧೧.೩೦ಕ್ಕೆ ಶ್ರೀ ದೈವದ ಕುಳಿಚ್ಚೋಟಂ, ಸಾಂಸ್ಕöÈತಿಕ ಕಾರ್ಯಕ್ರಮದಂಗವಾಗಿ ರಾತ್ರಿ ೧ರಿಂದ ಮಿಲ್ಲೇನಿಯಂ ಸ್ಟಾರ್ ಆರ್ಕೇಸ್ಟಾç ಮಂಗಳೂರು ಇವರಿಂದ ಚಲನಚಿತ್ರ ನಟ ಹಾಗೂ ರಂಗ ನಟ ಮಂಜು ರೈ ನಿರೂಪಣೆಯ ಮ್ಯೂಸಿಕಲ್ ನೈಟ್ ಸಂಗೀತ ರಸಮಂಜರಿ, ೧೩ರಂದು ಪ್ರಾತಕಾಲ ೪ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ಹಾಗೂ ಪ್ರಸಾದ ವಿತರಣೆ, ಬೆಳಿಗ್ಗೆ ೮ಕ್ಕೆ ಭಂಡಾರ ಹೊರಡಲಿದೆ.