ಉಡುಪಿ: ನಮ್ಮ ಅಂಗಡಿಯ 22ನೇ ಆವೃತ್ತಿಯು ಇದೇ ಎ.12, 13 ಮತ್ತು 14ರಂದು ಮಣಿಪಾಲ ಎಂಐಸಿ ಆವರಣದಲ್ಲಿ ನಡೆಯಲಿದ್ದು, ಮಾಹೆಯ ರಿಜಿಸ್ಟಾರ್ ಡಾ.ಪಿ.ಗಿರಿಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಎಂಐಸಿಯ ಸಹಾಯಕ ಪ್ರಾಧ್ಯಾಪಕಿ ಮಂಜುಳಾ ವೆಂಕಟ್ ರಾಘವನ್ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಮ್ಮ ಭೂಮಿ, ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಮನ್ ನ NGO ಅಂಗಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಭೂಮಿ ಸ್ಥಳೀಯ ಕುಶಲಕರ್ಮಿಗಳಿಗೆ ನಮ್ಮ ಅಂಗಡಿ ವೇದಿಕೆಯನ್ನು ಒದಗಿಸುತ್ತದೆ. ಕರಕುಶಲ ವಸ್ತುಗಳು, ಕೈಮಗ್ಗದ ಬಟ್ಟೆ ವಸ್ತುಗಳು, ಸಸ್ಯಗಳು ಮತ್ತು ಕುಂಬಾರಿಕೆಗಳು, ಪಾದರಕ್ಷೆಗಳು, ಪರಿಕರಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.
ಇದು ಈವೆಂಟ್ ವಿದ್ಯಾರ್ಥಿಗಳು ನಡೆಸುವ ದತ್ತಿ ಕಾರ್ಯಕ್ರಮವಾಗಿದ್ದು, ಮೂರು ದಿನಗಳಲ್ಲಿ ಒಟ್ಟು 45ಕ್ಕೂ ಹೆಚ್ಚಿನ ಸ್ಟಾಲ್ಗಳು ಬರಲಿವೆ ಎಂದು ಹೇಳಿದರು.