ಉಪ್ಪಳ: ನೆಲ್ಲಿಕತೀಯಾ ತರವಾಡು ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್, ಪಡಿಂಞರ್ ಚಾಮುಂಡಿ, ರಕ್ತೇಶ್ವರಿ ದೈವಗಳ ದೈವಸ್ಥಾನ ಕನಿಲ ಸಶಿಹಿತ್ಲು ಉಪ್ಪಳ ಇಲ್ಲಿ ಪಡಿಂಞರ್ ಚಾಮುಂಡಿ ದೈವದ ಪ್ರತಿಷ್ಟಾಪನೆ, ಕೊರತಿ ಅಮ್ಮನವರ ಪುನರ್ ಪ್ರತಿಷ್ಟೆ, ವರ್ಷಾವಧಿ ಪರ್ವ ಹಾಗೂ ನಾಗತಂಬಿಲ ಕಾರ್ಯಕ್ರಮ ಎಪ್ರಿಲ್ 12 ಮತ್ತು 13ರಂದು ನಡೆಯಲಿದೆ.
12ರಂದು ಬೆಳಿಗ್ಗೆ 6ಕ್ಕೆ ಪ್ರತಿಷ್ಟ ಗಣಹೋಮ, ಬೆಳಿಗ್ಗೆ 8.25ರಿಂದ 9.35ರ ಮುಹೂರ್ತದಲ್ಲಿ ಧರ್ಮದೈವ ಪಡಿಂಞರ್ ಚಾಮುಂಡಿ ದೈವದ ಪ್ರತಿಷ್ಟಾಪನೆ ಹಾಗೂ ಕೊರತಿ ಅಮ್ಮನವರ ಪುನರ್ ಪ್ರತಿಷ್ಟೆ, 10ರಿಂದ 10.30ರ ತನಕ ವೆಂಕಟರಮಣ ದೇವರ ಮುಡಿಪು ಶುದ್ದಿ, 11ರಿಂದ 12.30ರ ತನಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ನಾಗತಂಬಿಲ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ವರ್ಷಾವಧಿ ಪರ್ವ ಪ್ರಾರಂಭ, ರಾತ್ರಿ 10ಕ್ಕೆ ಅನ್ನಸಂತರ್ಪಣೆ, 11.30ಕ್ಕೆ ಕೊರತಿ ಅಮ್ಮನ ಕೋಲ, ಮುಂಜಾನೆ 2ಕ್ಕೆ ಶ್ರೀ ರಕ್ತೇಶ್ವರಿ ದೈವದ ಕೋಲ, 4ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, 4.30ಕ್ಕೆ ಶ್ರೀ ಪಡಿಂಞರ್ ಚಾಮುಂಡಿ ದೈವದ ಕೋಲ, 13ರಂದು ಸಂಜೆ 3ಕ್ಕೆ ಗುಳಿಗ ದೈವದ ಕೋಲ, 6ಕ್ಕೆ ಮರುಪುತ್ತರಿ [ಕೈಮೀದ್] ನಡೆಯಲಿದೆ.