ಉಡುಪಿ: ಉಡುಪಿಯ ನಿಟ್ಟೂರು ಬಬ್ಬುಸ್ವಾಮಿ ದೈವಸ್ಥಾನವೊಂದಕ್ಕೆ ನುಗ್ಗಿದ ಕಳ್ಳನೋರ್ವ ಹುಂಡಿಯಲ್ಲಿದ್ದ ಹಣ ಕಳವುಗೈದು ಪರಾರಿಯಾಗಿದ್ದಾನೆ. ಕಳ್ಳತನ ಮಾಡುವ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ.
ಈತ ದೈವಸ್ಥಾನದ ಒಳಗೆ ನುಗ್ಗಿ ಕಿಟಕಿ ಒಳಗೆ ಕೈಹಾಕಿ ಕಾಣಿಕೆ ಡಬ್ಬಕ್ಕೆ ಕೈಹಾಕಿ ಹಣ ಎಗರಿಸುವ ದೃಶ್ಯ ಸೆರೆಯಾಗಿದೆ. ಇದೀಗ ಸಿಸಿಟಿವಿ ಫೂಟೇಜ್ ಆಧರಿಸಿ ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ.